ಮಣಿಪಾಲ: ಎಂಐಟಿ ಫೋರ್ ಮೆನ್ ಗುರುಪ್ರಸಾದ್ ಭಟ್ ಬೀಳ್ಕೊಡುಗೆ

ಉಡುಪಿ ಸೆ.28(ಉಡುಪಿ ಟೈಮ್ಸ್ ವರದಿ): ಸುಮಾರು ಮೂವತ್ನಾಲ್ಕು ವರುಷ ಗಳಿಂದ ಮಣಿಪಾಲ ತಾಂತ್ರಿಕ ವಿದ್ಯಾಲಯದ ಇಲೆಕ್ಟ್ರಿಕಲ್ ಮೈಂಟೆನೆನ್ಸ್ ವಿಭಾಗದಲ್ಲಿ ಟೆಕ್ನಿಷಿಯನ್ ಆಗಿ ವೃತ್ತಿ ಜೀವನ ಆರಂಭಿಸಿ ಫೋರ್ ಮೆನ್ ಆಗಿ ನಿವೃತ್ತರಾದ ಗುರುಪ್ರಸಾದ್ ಭಟ್ ಅಚ್ಚಡ ರವರ ಬೀಳ್ಕೊಡುಗೆ ಸಮಾರಂಭವು ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆಯಿತು.

ಈ ವೇಳೆ ಸಂಸ್ಥೆಯ ನಿರ್ದೇಶಕ ಕಮಾಂಡರ್ ಡಾ.ಅನಿಲ್ ರಾಣ ಹಾಗೂ ಜಂಟಿ ನಿರ್ದೇಶಕ ಡಾ. ಸೋಮಶೇಖರ ಭಟ್ ಜೊತೆಯಾಗಿ ಗುರುಪ್ರಸಾದ್ ಭಟ್ ಅಚ್ಚಡ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಮುಖ್ಯ ಭದ್ರತಾ ಅಧಿಕಾರಿ  ಅಶೋಕ್ ರಾವ್ ಹಾಗೂ ವಿಭಾಗದ ಮುಖ್ಯಸ್ಥರಾದ ದೇವೇಂದ್ರ ನಾಯ್ಕ್, ಮಹೇಶ್ ಭಟ್, ಅನಂತ ಪದ್ಮನಾಭ ಭಟ್, ಸುಮಿತ್ ಮಲ್ಪೆ, ಜಯರಾಮ್ ಶೆಟ್ಟಿಗಾರ್ ಉಪಸ್ಥಿರಿದ್ದರು.

Leave a Reply

Your email address will not be published. Required fields are marked *

error: Content is protected !!