ಪ್ರಜಾಪ್ರಭುತ್ವದ ಮಾನವ ಸರಪಳಿ- ಉಡುಪಿ ಪ್ರಥಮ ಸ್ಥಾನ-ಪ್ರಸಾದ್ ರಾಜ್ ಕಾಂಚನ್ ಹರ್ಷ

ಉಡುಪಿ ಸೆ.22(ಉಡುಪಿ ಟೈಮ್ಸ್ ವರದಿ):ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜನರಿಗೆ ತಲುಪಿಸುವ ಮಹತ್ವದ ಉದ್ದೇಶದೊಂದಿಗೆ ಸಂವಿಧಾನ ಕೊಟ್ಟ ಬದುಕು ಭದ್ರಗೊಳಿಸುವ ಉದ್ದೇಶದಿಂದ  ಶಿರೂರು ಟೋಲ್ ಗೇಟ್ ಬಳಿಯಿಂದ ಹೆಜಮಾಡಿ ಟೋಲ್ ಗೇಟ್ ತನಕ ( 107 ಕಿ.ಮೀ) ಹಮ್ಮಿಕೊಂಡಿದ್ದ  ಮಾನವ  ಸರಪಳಿ ಕಾರ್ಯಕ್ರಮ ಯಶಸ್ವಿಯಾಗಿದ್ದು ಉಡುಪಿ ಜಿಲ್ಲೆ ಪ್ರಥಮ ಸ್ಥಾನಗಳಿಸಿರುತ್ತದೆ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಕರ್ನಾಟಕ ಸರಕಾರ  ಹಮ್ಮಿಕೊಂಡ ಈ ಮಾನವ ಸರಪಳಿ  ಕಾರ್ಯಕ್ರಮದ  ಯಶಸ್ಸು  ಭಾಗವಹಿಸಿದ ಪಕ್ಷದ  ಜನಪ್ರತಿನಿಧಿಗಳಿಗೆ ಮುಖಂಡರಿಗೆ ˌ ಬ್ಲಾಕ್  ಅಧ್ಯಕ್ಷರುಗಳಿಗೆ ˌ  ˌಮುಂಚೂಣಿ ಘಟಕದ  ಅಧ್ಯಕ್ಷರುಗಳಿಗೆ  ಹಾಗೂ  ಸಮಸ್ತ ಕಾರ್ಯಕರ್ತರಿಗೆ ಸಲ್ಲಬೇಕು. ಈ ಹಿನ್ನಲೆಯಲ್ಲಿ  ಭಾಗವಹಿಸಿ ರಾಜ್ಯದಲ್ಲಿಯೇ  ಪ್ರಥಮ  ಸ್ಥಾನ  ಬರಲು ತೊಡಗಿಸಿಕೊಂಡ  ಎಲ್ಲಾ  ಕಾಂಗ್ರೆಸ್ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!