ಉಡುಪಿ: ಗೃಹ ನಿರ್ಮಾಣ ಸಹಕಾರಿ ಸಂಘ-ವಾರ್ಷಿಕ ಮಹಾಸಭೆ

ಉಡುಪಿ ಸೆ.21(ಉಡುಪಿ ಟೈಮ್ಸ್ ವರದಿ): ಗೃಹ ನಿರ್ಮಾಣ ಸಹಕಾರಿ ಸಂಘದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷೆ ಇಂದು ರಮಾನಂದ ಭಟ್ ಅವರ ಅಧ್ಯಕ್ಷತೆಯಲ್ಲಿ ಉಡುಪಿ ಮಿಷನ್ ಕಂಪೌಂಡುನಲ್ಲಿರುವ ಜಗನ್ನಾಥ ಸಭಾ ಭವನದಲ್ಲಿ ನಡೆಯಿತು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷೆ  ಇಂದು ರಮಾನಂದ ಭಟ್ ರವರು, ಸಂಘದ ವಾರ್ಷಿಕ ವ್ಯವಹಾರವನ್ನು 100 ಕೋಟಿಗೆ ಹೆಚ್ಚಿಸಲು ಹಾಗೂ ಸಂಘದ ಕಾರ್ಯವ್ಯಾಪ್ತಿಯಲ್ಲಿ ಲಭ್ಯತೆಗನುಸಾರವಾಗಿ ಜಮೀನು ಖರೀದಿಸಿ ಅಭಿವೃದ್ಧಿಪಡಿಸಿ ಸದಸ್ಯರಿಗೆ ಹಂಚಲು ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಬಂದ ಲಾಭಾಂಶದಲ್ಲಿ ಸದಸ್ಯರಿಗೆ ಶೇ. 14 ರಷ್ಟು ಡಿವಿಡೆಂಡ್‌ ನ್ನು ಹಂಚುವುದೆಂದು ತೀರ್ಮಾನಿಸಲಾಯಿತು. ಹಾಗೂ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ವಿದ್ಯಾರ್ಥಿ ಸಹಾಯ ಧನ ವಿತರಣೆ ಮಾಡಲಾಯಿತು. 

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಎಲ್. ಉಮಾನಾಥ್ ಹಾಗೂ ನಿರ್ದೇಶಕರುಗಳಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಗಣಪತಿ ಕಿಣಿ ಅಲೆವೂರು, ಭಾಸ್ಕರ ಕಾಮತ್ ಕಿನಿಮೂಲ್ಕಿ, ಎಚ್. ಶಾಂತರಾಜ್ ಐತಾಳ್, ಸಂಜೀವ ಕಾಂಚನ್ ಎ. ರಾಧಾಕೃಷ್ಣ ಶೆಣೈ, ದೇವದಾಸ್ ಯು, ಸುಜಾತ ಎಸ್. ಪ್ರಭು. ಹಾಗೂ ಗೋಪಾಲ್ ನಾಯ್ಕ, ಸಂಘದ ವ್ಯವಸ್ಥಾಪಕರಾದ ಅಶೋಕ್ ಭಟ್. ಮಾರ್ಪಳ್ಳಿ, ಸಂಘದ ಉಪಾಧ್ಯಕ್ಷರಾದ ಎಲ್. ಉಮಾನಾಥ್  ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

error: Content is protected !!