ಹಿರಿಯಡ್ಕ: ಶ್ರೀವಿಶ್ವಕರ್ಮ ಸಮಾಜೋದ್ಧಾರಕ ಸಂಘ- ವಾರ್ಷಿಕ ಮಹಾಸಭೆ

ಉಡುಪಿ ಸೆ.19(ಉಡುಪಿ ಟೈಮ್ಸ್ ವರದಿ): ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ ಕೊಂಡಾಡಿ, ಭಜನೆಕಟ್ಟೆ ಹಿರಿಯಡ್ಕ ಇದರ ವಾರ್ಷಿಕ ಮಹಾಸಭೆ ಇಂದು ಸಂಘದ ಸಭಾಂಗಣದಲ್ಲಿ ನಡೆಯಿತು.  

ಜಯರಾಮ್ ಆಚಾರ್ಯ ಕೋಟ್ನಕಟ್ಟೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ 43ನೇ ವರ್ಷದ ವಾರ್ಷಿಕ ಮಹಾಸಭೆಯನ್ನು ಹಿರಿಯಡ್ಕದ ಮಹೊತೋಭಾರ ಶ್ರೀ ವೀರಭದ್ರ ದೇವಸ್ಥಾನದ ಪ್ರಧಾನ ಅರ್ಚಕ ರಂಗನಾಥ್ ಭಟ್ ಅವರು ಉದ್ಘಾಟಿಸಿದರು.

ನಾಟಿ ವೈದ್ಯೆ ರತ್ನ ಆಚಾರ್ಯ ಕೊಡಿಬೆಟ್ಟು, ಸಂಘದ ಹಿರಿಯ ಸದಸ್ಯರು ಕೆ. ವಾಸು ಆಚಾರ್ಯ ಕೊಂಡಾಡಿ ಇವರನ್ನು ಸನ್ಮಾನಿಸಲಾಯಿತು ಹಾಗೂ ಕಳೆದ ಸಾಲಿನ ಎಸ್. ಎಸ್. ಎಲ್. ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 80 ಮೇಲ್ಪಟ್ಟು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಂಘದ ಸದಸ್ಯ ನಾರಾಯಣ ಆಚಾರ್ಯ ಕಟಪಾಡಿ ಮತ್ತು ಪ್ರಕಾಶ್ ಆಚಾರ್ಯ ಗುಡ್ಡೆಯಂಗಡಿ  ವಿದ್ಯಾನಿಧಿಯನ್ನು ವಿತರಿಸಿದರು. ಸಂಘದಿಂದ ಏರ್ಪಡಿಸಲಾದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಈ ವೇಳೆ ಬಂಟಕಲ್ಲು ಪಾಲುಮೆ ರವಿ ಪುರೋಹಿತ್ ಇವರ ಆಚಾರ್ಯತ್ವದಲ್ಲಿ ಶ್ರೀ ವಿಶ್ವಕರ್ಮ ಹೋಮ ಸಹಿತ ಪೂಜೆಯು ವಿಜೃಂಭಣೆಯಿಂದ ನೆರವೇರಿಸಲಾಯಿತು.

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ವಿದ್ವಾನ್ ದಾಮೋದರ ಶರ್ಮಾ, ಡಾ|| ಪ್ರತಿಮಾ ಜಯರಾಮ್ ಆಚಾರ್ಯ ಮಣಿಪಾಲ, ಗೌರವಧ್ಯಕ್ಷರಾದ ಲ. ಮೋಹನ್ ದಾಸ್ ಆಚಾರ್ಯ ಗುಡ್ಡೆಯಂಗಡಿ, ಮಹಿಳಾ ಮಂಡಳಿ ಅಧ್ಯಕ್ಷೆ ಹೇಮಲತಾ ಆಚಾರ್ಯ ಗುಡ್ಡೆಯಂಗಡಿ, ಸದಸ್ಯ ಶ್ರೀನಿವಾಸ್ ಆಚಾರ್ಯ ಕೊಂಡಾಡಿ, ರತ್ನಕರ ಆಚಾರ್ಯ ಗುಡ್ಡೆಯಂಗಡಿ, ರಾಜೇಶ್ ಆಚಾರ್ಯ ಗುಡ್ಡೆಯಂಗಡಿ ಮಹೇಶ್ ಆಚಾರ್ಯ ಮಾಣೈ, ಶಂಕರ್ ಆಚಾರ್ಯ ಕೊಂಡಾಡಿ, ಅನಿಶ್ ಕೆ. ಆಚಾರ್ಯ ಕೊಂಡಾಡಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!