ಉಡುಪಿ: ಮೆಡಿಕೇರ್ ರಿಕ್ಷಾ  ನಿಲ್ದಾಣಕ್ಕೆ ಸೋಲಾರ್ ದೀಪ ಕೊಡುಗೆ

ಉಡುಪಿ ಸೆ.12( ಉಡುಪಿ ಟೈಮ್ಸ್ ವರದಿ): ನಗರದ ಕೋರ್ಟ್ ಹಿಂಬದಿ ರಸ್ತೆಯಲ್ಲಿರುವ ಮೆಡಿಕೇರ್ ರಿಕ್ಷಾ ನಿಲ್ದಾಣ ಮತ್ತು ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘಟನೆ ಇದರ ಮೆಡಿಕೇರ್ ರಿಕ್ಷಾ ನಿಲ್ದಾಣಕ್ಕೆ ಕೊಡುಗೆಯಾಗಿ ನೀಡಲಾದ ಸೋಲಾರ್ ದೀಪವನ್ನು ದಾನಿಗಳಾದ ಮೆಡಿಕೇರ್ ಮೆಡಿಕಲ್ಸ್ ಮತ್ತು ಮೆಡಿಕೇರ್ ಕ್ಲಿನಿಕಲ್, ಡಯಾಗ್ನೋಸ್ಟಿಕ್ ಲ್ಯಾಬ್‌ನ ಮಾಲಕರಾದ ರವೀಂದ್ರ ಶೆಟ್ಟಿ ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ  ಸಂಘಟನೆಯ ಗೌರವ ಅಧ್ಯಕ್ಷರಾದ ವಿಟ್ಟಲ  ಜತ್ತನ್ನ, ರಾಜೇಶ್ ಬಿ ಶೆಟ್ಟಿ, ಅಧ್ಯಕ್ಷ ಚನ್ನಕೇಶವ ಭಟ್, ಉಪಾಧ್ಯಕ್ಷರಾದ ಅಶ್ವಿನ್, ಜಯಶೀಲ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಪೂಜಾರಿ, ಉಪ ಕಾರ್ಯದರ್ಶಿ ಗಿರೀಶ್, ಕೋಶಾಧಿಕಾರಿ ಸ್ಟ್ಯಾಂಲಿ  ಬಂಗೇರ , ಸಂಘಟನಾ ಕಾರ್ಯದರ್ಶಿ ಜಗದೀಶ್, ಸದಸ್ಯರಾದ ಸದಾಾನಂದ  ಸುವರ್ಣ, ಶರತ್ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!