ಕಾಪು: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ಕಾಪು ಸೆ.12(ಉಡುಪಿ ಟೈಮ್ಸ್ ವರದಿ): ಕ್ಲಸ್ಟರ್ ಮಟ್ಟದ  2024-25ನೇ ಸಾಲಿನ ಪ್ರತಿಭಾ ಕಾರಂಜಿಯು ಕೈಪುಂಜಾಲುವಿನ ವಿಶ್ವೇಶ ತೀರ್ಥ ವಿದ್ಯಾಲಯದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಾಗರ್ ಎಜುಕೇಶನ್ ಟ್ರಸ್ಟ್ ಇದರ ಅಧ್ಯಕ್ಷರಾದ ಸತೀಶ್ ಕುಂದರ್ ವಹಿಸಿದ್ದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ  ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾದ ಸುನೀತಾ, ಕಾಪು ಕ್ಲಸ್ಟರ್‌ನ  ಸಿ.ಆರ್.ಪಿ  ಬಬಿತಾ ನಾಗರಾಜ್, ಕೈಪುಂಜಾಲು ಮೀನುಗಾರರ ವಿವಿಧೊದ್ದೇಶ ಸಹಕಾರ ಸಂಘದ ಅಧ್ಯಕ್ಷ್ಯೆ ಗಿರಿರಾಜ್ ಕಿದಿಯೂರು,  ಉದ್ಯಮಿ ಮತ್ತು ಸಮಾಜ ಸೇವಕರಾದ ಪ್ರಭಾಕರ ಪೂಜಾರಿ ಕೈಪುಂಜಾಲು, ಕ್ರೀಡಾಧಿಕಾರಿ ಹಾಗೂ ದೈಹಿಕ ಶಿಕ್ಷಕರಾದ  ಹಿತೇಶ್, ವಿದ್ಯಾಸಾಗರ್ ಎಜುಕೇಶನ್ ಟ್ರಸ್ಟ್ ಇದರ ಕಾರ್ಯದರ್ಶಿಯಾಗಿರುವ ರಮೇಶ್ ಪೂಜಾರಿ, ಚಂದ್ರಶೇಖರ್ ಅಮೀನ್, ವಿಶ್ವೇಶ ತೀರ್ಥ ವಿದ್ಯಾಲಯ ಇದರ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಲೂಕೀಸ್ ಸೋನ್ಸ್ ಮತ್ತು ಪ್ರಾಂಶುಪಾಲರಾದ ಸಾಕ್ಷಾತ್ ಯು.ಕೆ ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು  ಶಿಕ್ಷಕಿಯರಾದ ರೇಖಾ ರಾವ್ ನಿರೂಪಿಸಿದರು, ಅಶ್ವಿನಿ ಸ್ವಾಗತಿಸಿದರು ಮತ್ತು ಕೀರ್ತಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!