ಮಣಿಪಾಲ: ಅರುಣ್ ಕುಮಾರ್‌ರಿಗೆ ಮಾಹೆಯಿಂದ ಡಾಕ್ಟರೇಟ್ ಗೌರವ

ಮಣಿಪಾಲ ಸೆ.03(ಉಡುಪಿ ಟೈಮ್ಸ್ ವರದಿ): ಎಂಐಟಿ ಮಣಿಪಾಲದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅರುಣ್ ಕುಮಾರ್ ಅವರ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಿ ಮಣಿಪಾಲದ ಉನ್ನತ ಶಿಕ್ಷಣ ಅಕಾಡೆಮಿ ಗೌರವಿಸಿದೆ. 

ಡಾ. ಅರುಣ್ ಕುಮಾರ್ ಅವರ ಹೆಲಿಕಲ್ ಗ್ರೂವ್ಡ್ ರೀನ್‌ಫೋರ್ಸ್ಡ್ ಕಾಂಕ್ರೀಟ್ ಪೈಲ್ ಇನ್ ಕೊಹೆಶನ್‌ಲೆಸ್‌ನಲ್ಲಿ ಅಧ್ಯಯನಗಳು ಎಂಬ ಪಿಎಚ್‌ಡಿ  ಪ್ರಬಂಧಕ್ಕೆ ಡಾಕ್ಟರೇಟ್ ಗೌರವ ನೀಡಲಾಗಿದೆ.

ಮುನಿರಾಜು ವೈ ಆರ್ ಮತ್ತು ವರಲಕ್ಷ್ಮಿ ದಂಪತಿಯ ಪುತ್ರನಾಗಿರುವ ಡಾ. ಅರುಣ್ ಕುಮಾರ್ ಅವರು, ಸಂಶೋಧನಾ ಮೇಲ್ವಿಚಾರಕರಾದ ಡಾ.ಕಿರಣ್ ಕುಮಾರ್ ಶೆಟ್ಟಿ ಹಾಗೂ ಡಾ.ಎ.ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಮಂಡಿಸಿದ್ದರು.

Leave a Reply

Your email address will not be published. Required fields are marked *

error: Content is protected !!