ಉದ್ಯಾವರ: “ಸುಂದರ ಪರಿಸರ ಸ್ನೇಹ ಕುಟುಂಬ”- ಛಾಯಾಚಿತ್ರ ಸ್ಪರ್ಧೆ

ಉದ್ಯಾವರ ಆ.10(ಉಡುಪಿ ಟೈಮ್ಸ್ ವರದಿ): ಸಂಪಿಗೆನಗರದ ಫ್ರೆಂಡ್ಸ್ ಗಾರ್ಡನ್ ಮತ್ತು ಬಾಲ ಗಣಪತಿ ಭಜನಾ ಮಂಡಳಿ ಇದರ ವತಿಯಿಂದ “ಸುಂದರ ಪರಿಸರ ಸ್ನೇಹ ಕುಟುಂಬ” ಎಂಬ ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಆ. 31 ರ ಒಳಗೆ ಛಾಯಾಚಿತ್ರವನ್ನು ಕಳುಹಿಸಬೇಕು. ವಿಜೇತರಿಗೆ ಬಹುಮಾನವನ್ನು ಸೆ.7ರಂದು ನಡೆಯುವ ಗಣೇಶೋತ್ಸವದ ವೇದಿಕೆಯಲ್ಲಿ ನೀಡಲಾಗುವುದು. ಉತ್ತಮವಾದ ಛಾಯಾಚಿತ್ರಕ್ಕೆ ಪ್ರಥಮ, ದ್ವಿತೀಯ, ತೃತೀಯ ಹಾಗೂ 5 ಆಕರ್ಷಕ ಚಿತ್ರಗಳಿಗೆ ಬಹುಮಾನಗಳನ್ನು ನೀಡಲಾಗುತ್ತದೆ. ಅಲ್ಲದೆ ಪ್ರಮಾಣ ಪತ್ರದ ಜೊತೆಗೆ ನಿಮ್ಮ ಕೂಡು ಕುಟುಂಬವನ್ನು ವೇದಿಕೆಯಲ್ಲಿ ಗೌರವಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಈ ಸ್ಪರ್ಧೆಯಲ್ಲಿ ಭಾಗವಹಿಸಲು ನಿಯಮಗಳು ಹೀಗಿವೆ….
ಉತ್ತಮ ಪರಿಸರದಲ್ಲಿ ಹೊಲಗದ್ದೆ, ಕೆರೆ, ಜಲಪಾತ, ಹೂದೋಟ ಮುಂತಾದ ಪ್ರಾಕೃತಿಕ ಸೌಂದರ್ಯದಲ್ಲಿ ನಿಮ್ಮ ಕುಟುಂಬದ ಜೊತೆಗಿನ ಛಾಯಾಚಿತ್ರವನ್ನು ಕಳುಹಿಸಬೇಕು.

ಕನಿಷ್ಠ 3 ಕ್ಕಿಂತ ಮೇಲ್ಪಟ್ಟ ಸದಸ್ಯರಿರುವ 2 ಛಾಯಾಚಿತ್ರವನ್ನು ಕಳುಹಿಸಬಹುದು.
ಸುಂದರ ಪರಿಸರ ಮತ್ತು ಸಾಂಸ್ಕೃತಿಕ ವಸ್ತ್ರಾಲಂಕಾರ ಇರುವ ಛಾಯಾಚಿತ್ರಕ್ಕೆ ಪ್ರಾಶಸ್ತ್ಯ ನೀಡಲಾಗುವುದು.

ಛಾಯಾಚಿತ್ರವು 6 X 9 ಅಳತೆಯಲ್ಲಿರಬೇಕು. ಪೋಟೋ ಹಿಂದೆ ನಿಮ್ಮ ಕುಟುಂಬದ ಪ್ರಮುಖ ಸದಸ್ಯರೋರ್ವರ ಹೆಸರು ವಿಳಾಸ ಮೊಬೈಲ್ ಸಂಖ್ಯೆ ನಮೂದಿಸಬೇಕು.

ಈ ಸ್ಪರ್ಧೆಯಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ

ಈ ಸ್ಪರ್ಧೆಯಲ್ಲಿ ಭಾಗವಹಿಸಲು ನಿಮ್ಮ ಛಾಯಾಚಿತ್ರವನ್ನು ಅಂಚೆ ಮೂಲಕ ಕಳುಹಿಸುವವರು ಸ್ವಾತಿ ರೆಸ್ಟೋರೆಂಟ್ ಮೆಸ್ಕಾಂ ಕಚೇರಿ ಬಳಿ, ಸಂಪಿಗೆನಗರ, ಉದ್ಯಾವರ, ಅಥವಾ ವಿನಾಯಕ ಮೆಡಿಕಲ್ ಗುಡ್ಡೆಯಂಗಡಿ, ಉದ್ಯಾವರ, ಅಥವಾ ಫ್ರೆಂಡ್ಸ್ ಗಾರ್ಡನ್, ಬಾಲಗಣಪತಿ ಭಜನಾ ಮಂಡಳಿ ಆರೂರುತೋಟ, ಸಂಪಿಗೆನಗರ ಉದ್ಯಾವರ ಅಂಚೆ, ಉಡುಪಿ ತಾಲೂಕು ಮತ್ತು ಜಿಲ್ಲೆ. ವಿಳಾಸಕ್ಕೆ ಕಳುಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ 99640 25581 / 7829598945 / 9900411419 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಆಯೋಜಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!