ಪ್ರಥಮ ಜಿಲ್ಲಾ ಕನ್ನಡ ಜನಪದ ಸಮ್ಮೇಳನ: ಡಾ. ಗಣನಾಥ್ ಎಕ್ಕಾರಿಗೆ ಆಮಂತ್ರಣ

ಉಡುಪಿ ಜು.27(ಉಡುಪಿ ಟೈಮ್ಸ್ ವರದಿ): ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲೆ ಇದರ ವತಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಗಸ್ಟ್ 27ರಂದು ನಡೆಯಲಿರುವ ಪ್ರಥಮ ಜಿಲ್ಲಾ ಕನ್ನಡ ಜನಪದ ಸಮ್ಮೇಳನ ಇದರ ಸರ್ವಾಧ್ಯಕ್ಷತೆ ವಹಿಸಲಿರುವ ಖ್ಯಾತ ಜಾನಪದ ವಿದ್ವಾಂಸರಾದ ಡಾ. ಗಣನಾಥ್ ಎಕ್ಕಾರು ಇವರನ್ನು ಸಮ್ಮೇಳನಕ್ಕೆ ಶಾಲು ಹೊದಿಸಿ ಫಲ ತಾಂಬೂಲ ನೀಡಿ ಆಮಂತ್ರಿಸಲಾಯಿತು.

ಈ ವೇಳೆ ಡಾ| ಗಣನಾಥ ಎಕ್ಕಾರು ಮತ್ತು ಡಾ.ನಿಕೇತನ , ಶಾಲಿಕಾ ಅವರು ಆಮಂತ್ರಣಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಅಧ್ಯಕ್ಷ ಡಾ. ಗಣೇಶ್ ಗಂಗೊಳ್ಳಿ, ಜಿಲ್ಲಾ ಕಾರ್ಯದರ್ಶಿ ಪ್ರಕಾಶ್ ಸುವರ್ಣ ಕಟ್ಪಾಡಿ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ತಾಲೂಕು ಅಧ್ಯಕ್ಷೆ ಮಾಯಾ ಕಾಮತ್ ಉಪಸ್ಥಿರಿದರು .

Leave a Reply

Your email address will not be published. Required fields are marked *

error: Content is protected !!