ಉಡುಪಿ ತುಳುಕೂಟದಿಂದ ನಾಟಿ ವೈದ್ಯೆ ಲೀಲಾ ಆಚಾರ್ಯರಿಗೆ ಸನ್ಮಾನ

ಉಡುಉಡುಪಿ ಜು.21(ಉಡುಪಿ ಟೈಮ್ಸ್ ವರದಿ): ತುಳುಕೂಟ ಉಡುಪಿಯ ವತಿಯಿಂದ 95 ವರ್ಷ ಪ್ರಾಯದ ನಾಟಿ ವೈದ್ಯರಾದ ಬಡಾನಿಡಿಯೂರಿನ ನಿವಾಸಿ ಲೀಲಾ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು.

ಕಳೆದ ಕೆಲವು ವರ್ಷಗಳಿಂದ ವಂಶಪಾರಂಪರ್ಯವಾಗಿ ಸರ್ಪಸುತ್ತು ಆದ ರೋಗಿಗಳಿಗೆ ಗಿಡಮೂಲಿಕೆಯ ಔಷಧಿಯನ್ನು ನೀಡುತ್ತಾ ಸಾವಿರಕ್ಕೂ ಹೆಚ್ಚು ರೋಗಿಗಳನ್ನು ತನ್ನ ಗಿಡಮೂಲಿಕೆಯ ಔಷಧಿ ನೀಡುವುದರ ಮೂಲಕ ಗುಣಮುಖ ಮಾಡಿದ್ದಾರೆ. ಅವರ ಈ ಸಾಧನೆಗಾಗಿ ತುಳುಕೂಟ ಉಡುಪಿಯ ವತಿಯಿಂದ ಅವರ ಮನೆಯಲ್ಲಿಯೇ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತುಳುಕೂಟ ಉಡುಪಿಯ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೆಮ್ತೂರು ತುಳುನಾಟಕ ಸ್ಪರ್ಧೆಯ ಸಂಚಾಲಕ ಪ್ರಭಾಕರ ಭಂಡಾರಿ, ಮದರಂಗಿದ ರಂಗ್ ಸ್ಪರ್ಧೆಯ ಸಂಚಾಲಕಿ ಯಶೋದ ಕೇಶವ್, ಧ. ಗ್ರಾ. ಯೋಜನೆಯ ಸೇವಾಪ್ರತಿನಿಧಿ ಸುಮಾ ಆಚಾರ್ಯ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!