ಕಟಪಾಡಿ- ರೋಟರಿಯ ಪದಪ್ರಧಾನ ಸಮಾರಂಭ

ಉಡುಪಿ ಜು.17(ಉಡುಪಿ ಟೈಮ್ಸ್ ವರದಿ): ಜಾಗತಿಕ ಸೇವಾ ಸಂಸ್ಥೆ ರೋಟರಿ ಸ್ಥಳೀಯವಾಗಿ ವಿಸ್ತರಿಸಲ್ಪಟ್ಟು ಜನ ಸಮುದಾಯದ ಅವಶ್ಯಕತೆಗಳನ್ನ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತದೆ ಎಂದು ರೋಟರಿ ಜಿಲ್ಲೆ, 3 1 8 2 ಇದರ ಮಾಜಿ ಜಿಲ್ಲಾ ಗವರ್ನರ್ ಮೇಜರ್ ಡೋನಲ್ ರೊ. ಅಭಿನಂದನ ಶೆಟ್ಟಿ ಅವರು ಹೇಳಿದ್ದಾರೆ.

ಕಟಪಾಡಿಯ ರೋಟರಿಯ 2024-25 ನೇ ಸಾಲಿನ ನೂತನ ಅಧ್ಯಕ್ಷ ಸುನೀಲ್ ಡಿ ಬಂಗೇರ ಮತ್ತು ನೂತನ ಪದಾಧಿಕಾರಿಗಳ ತಂಡಕ್ಕೆ ಪದ ಪ್ರಧಾನ ನೆರವೇರಿಸಿ ಮಾತನಾಡಿದ ಅವರು ಕಳೆದ ಎರಡು ದಶಕಗಳಿಂದ ಸಮಾಜ ಮುಖಿಯಾಗಿ ತನ್ನ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಕಟಕಡಿಯ ರೋಟರಿ ತನ್ನ ಪರಂಪರೆಯನ್ನು ಮುಂದುವರಿಸಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಹಾಯಕ ಗವರ್ನರ್ ಪಿಎಚ್ ಎಫ್ ಜಗನ್ನಾಥ ಕೋಟೆ , ವಲಯ ಸೇನಾನಿ ಹೇಮಂತ್ ಯು ಕಾಂತ್ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ನೂತನ ತಂಡಕ್ಕೆ ಶುಭ ಹಾರೈಸಿದರು.

ನೂತನ ಅಧ್ಯಕ್ಷ ಸುನೀಲ್ ಡಿ ಬಂಗೇರ ಅವರು ಮಾತನಾಡಿ, ಕಳೆದ ಎರಡು ದಶಕಗಳಿಂದ ಕಾಪಾಡಿ ರೋಟರಿ ನಡೆಸಿ ಕೊಂಡು ಬಂದ ಸೇವಾ ಪರಂಪರೆಗೆ ಚ್ಯುತಿ ಬಾರದ ರೀತಿಯಲ್ಲಿ ಎಲ್ಲರ ಸಹಕಾರದೊಂದಿಗೆ ಕ್ಲಬ್‌ನ್ನು ಮುನ್ನಡೆಸಿಕೊಂಡು ಹೋಗುವುವಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

ಈ ವೇಳೆ ಅಖಿಲೇಶ್ ಕೋಟ್ಯಾನ್, ಸತೀಶ್ ಚಂದ್ರ, ಇಕ್ಬಾಲ್, ಸಂಶುದ್ದೀನ್ ಅವರು ನೂತನ ಸದಸ್ಯತ್ವ ಪಡೆದುಕೊಂಡರು.

ಗಣಿತ ಶಾಸ್ತ್ರ ದಲ್ಲಿ ಪಿಎಚ್‌ಡಿ ಪಡೆದ ವರ್ಷ ಅರ್ಜುನ್ ಅವರನ್ನು ಸನ್ಮಾನಿಸಲಾಯಿತು. ಹಾಗೂ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದರ ಜೊತೆಗೆ ಪೂರ್ವ ವಲಯ ಸೇನಾನಿ ಡಾ. ಕೆಂಪರಾಜ್, ರೊ.ಗಣೇಶ್ ಕಿಣಿ, ರಿತೇಶ್ ಬಿ. ಕೋಟ್ಯಾನ್ ಶಕುಂತಳಾ ಎ ಪೂಜಾರಿ ಇವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷ ರಿತೇಶ್ ಕೋಟ್ಯಾನ್, ಸತ್ಯೇಂದ್ರ ಪೈ, ಗಿರಿಧರ್ ಶೆಟ್ಟಿ, ವಿಲ್‌ಫ್ರೆಡ್, ಆಶಾ ಅಂಚನ್, ತುಳಸಿ ದೇವಾಡಿಗ, ಡಾ. ಉದಯ್ ಕುಮಾರ್ ಶೆಟ್ಟಿ, ಶ್ರೀಕರ ಅಂಚನ್, ಕಟಪಾಡಿ ಶಂಕರ ಪೂಜಾರಿ, ಕಾರ್ಯದರ್ಶಿ ಲಕ್ಷ್ಮೀ ಬಿ. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!