ಕಾರ್ಕಳ ಜ್ಞಾನಸುಧಾ : ವಿದ್ಯಾರ್ಥಿ ಸಂಸತ್ ಉದ್ಘಾಟನೆ 

ಕಾರ್ಕಳ ಜು.16(ಉಡುಪಿ ಟೈಮ್ಸ್ ವರದಿ) : ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ 2024-25 ನೇ ಸಾಲಿನ ವಿದ್ಯಾರ್ಥಿ ಸಂಸತ್ ಉದ್ಘಾಟಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಒ ಹಾಗೂ ಪ್ರಾಂಶುಪಾಲ ದಿನೇಶ್.ಎಂ. ಕೊಡವೂರ್ ವಹಿಸಿದ್ದರು. ಈ ವೇಳೆ ಶಿಕ್ಷಣ ಸಂಸ್ಥೆಯ ಉಪಪ್ರಾಂಶುಪಾಲೆ ವಾಣಿ  ಕೆ. ಪ್ರತಿಜ್ಞಾವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು.

ಕಾರ್ಯಕ್ರಮದಲ್ಲಿ ಕಾರ್ಕಳ ಜ್ಞಾನಸುಧಾ ಪ.ಪೂ.ಕಾಲೇಜಿನ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಸಂಗೀತಾ ಕುಲಾಲ್ ಅವರು  ಶಾಲಾ ಸಂಸತ್ತಿನ ಪದಾಧಿಕಾರಿಗಳಿಗೆ  ಪದನಾಮದ ಪದಕ ತೊಡಿಸಿ ವಿವಿಧ ನಾಯಕರ ಉದಾಹರಣೆಯ ಮೂಲಕ ಪ್ರಜಾಪ್ರಭುತ್ವದಲ್ಲಿ ನಾಯಕತ್ವದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. 

ಈ ಸಂದರ್ಭ ಪಿ.ಆರ್.ಒ ಜ್ಯೋತಿಪದ್ಮನಾಭ ಭಂಡಿ, ಪ್ರೌಢಶಾಲಾ ಅಕಾಡೆಮಿಕ್ ಅಡ್ವಟೈಸರ್ ಶಾರದಾ ಅಂಬರೀಶ್, ದೈಹಿಕ ಶಿಕ್ಷಕಿ ರೇಷ್ಮಾ ಸಾಲೀಸ್, ಗಣಿತ ಶಿಕ್ಷಕಿ ಆಜ್ಞಾ ಸೋಹಂ, ವಿದ್ಯಾರ್ಥಿ ನಾಯಕ ದೈವಿಕ್ ಶೆಟ್ಟಿ. ಉಪನಾಯಕಿ ಆಶ್ನಿ ಕೋಟ್ಯಾನ್ ಹಾಗೂ ವಿವಿಧ ವಿಭಾಗಗಳ ಸಚಿವರು, ಉಪಸಚಿವರು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

error: Content is protected !!