ಕಾರ್ಕಳ: ಸಿ.ಎ. ಅಂತಿಮ ಪರೀಕ್ಷೆ-ಜ್ಞಾನಸುಧಾದ ಮೂವರು ಹಳೆ ವಿದ್ಯಾರ್ಥಿಗಳು ತೇರ್ಗಡೆ

ಕಾರ್ಕಳ ಜು.12(ಉಡುಪಿ ಟೈಮ್ಸ್ ವರದಿ): ಐ.ಸಿ.ಎ.ಐ ಮೇ ತಿಂಗಳಲ್ಲಿ ನಡೆಸಿದ 2024ರ ಸಾಲಿನ ಸಿ.ಎ.ಅಂತಿಮ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಮೂವರು ಹಳೇ ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ.

ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಹಿರಿಯಡ್ಕದ ಅಂಜಾರು ನಿವಾಸಿ  ಅಶೋಕ್.ಎನ್.ಶೆಟ್ಟಿ ಹಾಗೂ ಸರೋಜ.ಎ.ಶೆಟ್ಟಿ ದಂಪತಿಗಳ ಪುತ್ರ ಸುಹಾಸ್ ಎ.ಶೆಟ್ಟಿ , ಹಿರಿಯಡ್ಕದ ಕೆ.ಏಕನಾಥ್ ಶೆಣೈ ಮತ್ತು ಕೆ.ಮಾಲಿನಿ ಶೆಣೈ ದಂಪತಿಗಳ ಪುತ್ರ ಕೆ.ಪ್ರಮೋದ್ ಶೆಣೈ ಹಾಗೂ  ಹಿರಿಯಡ್ಕದ ವಿಜಯ್ ಕುಮಾರ್ ಎಚ್ ಮತ್ತು ವಿನುತಾ ವಿಜಯ್ ಕುಮಾರ್ ಪುತ್ರ ತನಿಶ್ ವಿ. ಗುಜರಾನ್ ಸಿ.ಎ.ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ತಮ್ಮ ಹುಟ್ಟೂರಿಗೆ, ಪೋಷಕರಿಗೆ ಹಾಗೂ ಓದಿದ ವಿದ್ಯಾಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ.

ಇವರ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಮೆಚ್ಚುಗೆ ವ್ಯಕ್ತಪಡಿಸುವುದರೊಂದಿಗೆ, ಆಡಳಿತ ಮಂಡಳಿ ಹಾಗೂ ಸಂಸ್ಥೆಯ ವಾಣ ಜ್ಯ ವಿಭಾಗ ಸಹಿತ ಜ್ಞಾನಸುಧಾ ಪರಿವಾರವು  ಹರ್ಷವ್ಯಕ್ತಪಡಿಸಿದೆ.  

Leave a Reply

Your email address will not be published. Required fields are marked *

error: Content is protected !!