ಉಡುಪಿ: ನೆರವಿನ ನಿರೀಕ್ಷೆಯಲ್ಲಿ ಮೃತ ಗಿರೀಶ್ ಶೇರಿಗಾರ್ ಕುಟುಂಬ

Oplus_131072

ಉಡುಪಿ, ಜು.12(ಉಡುಪಿ ಟೈಮ್ಸ್ ವರದಿ): ಇತ್ತೀಚೆಗೆ ಕರ್ತವ್ಯ ನಿರತರಾಗಿದ್ದ ವೇಳೆ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಎ.ಸಿ ಮೆಕ್ಯಾನಿಕ್ ಗಿರೀಶ್ ಶೇರಿಗಾರ್ ಅವರ ಮಕ್ಕಳ ವಿದ್ಯಾಭ್ಯಾಸ ಹಾಗೂ ಉತ್ತಮ ಭವಿಷ್ಯಕ್ಕಾಗಿ ಕುಟುಂಬ ಸಹೃದಯಿ ದಾನಿಗಳ ಸಹಾಯ ಹಸ್ತಚಾಚಿದ್ದಾರೆ.

ಎಸಿ ಮೆಕ್ಯಾನಿಕ್ ಆಗಿದ್ದ ಬ್ರಹ್ಮ ಬೈದರ್ಕಳ ನಗರ ನಿವಾಸಿ ಗಿರೀಶ್ ಶೇರೀಗಾರ್ ಕಿನ್ನಿಮೂಲ್ಕಿ  ಅವರು ಕಳೆದ ತಿಂಗಳು ಜೂನ್ 3 ರಂದು ತನ್ನ ಕೆಲಸದ ಸಲುವಾಗಿ ಉಡುಪಿಯ ಶ್ರೀಕೃಷ್ಣ ಮಠದ ಪಾರ್ಕಿಂಗ್ ಬಳಿ ಇರುವ ಹೊಟೇಲ್‌ನಲ್ಲಿ ತನ್ನ ಕರ್ತವ್ಯ ನಿರತರಾಗಿದ್ದಾಗ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದರು. 

ತಮ್ಮ ಕುಂಟುಂಬದ ಆಧಾರವಾಗಿದ್ದ ಗಿರೀಶ್ ರವರ ಅಗಲುವಿಕೆ ಈಗ ಆ ಕುಟುಂಬಕ್ಕೆ ದಿಕ್ಕೇ ತೋಚದಂತೆ ಮಾಡಿದೆ. ಬಡ ಕುಟುಂಬದ ಗಿರೀಶ್ ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದು ಒಬ್ಬಳು 7ನೇ ತರಗತಿ ಹಾಗೂ ಮತ್ತೊಬ್ಬಳು 4ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಇದೀಗ ಗಿರೀಶ್ ಅವರ ವೈಷ್ಣವಿ ಹಾಗೂ ಧ್ವನಿ ಅವರ ವಿದ್ಯಾಬ್ಯಾಸ ಮುಂದುವರೆಸಲು ಕೂಡ ಕಷ್ಟದ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಕುಟುಂಬ ಈಗ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಮುಂದಿನ ಭವಿಷ್ಯಕ್ಕೆ ಸಹೃದಯಿ ದಾನಿಗಳ ನಿರೀಕ್ಷೆಯಲ್ಲಿ ಇದ್ದು, ಸಹಾಯ ಮಾಡಲಿಚ್ಚಿಸುವ ದಾನಿಗಳು ಈ ಕೆಳಗಿನ ಬ್ಯಾಂಕ್ ಖಾತೆಗೆ ಧನ ಸಹಾಯ ಮಾಡುವ ಮೂಲಕ ಸಹಕರಿಸಬಹುದಾಗಿದೆ. 

ದಾನಿಗಳು ಗೂಗಲ್ ಪೇ ಯೂ ಮಾಡಬಹುದಾಗಿದ್ದು, ಗೂಗಲ್ ಪೇ ನಂಬರ್ 9164193223 ಹಾಗೂ ಬ್ಯಾಂಕ್ ಖಾತೆ ಕರ್ನಾಟಕ ಬ್ಯಾಂಕ್ ಕನ್ನರ್ಪಾಡಿ ಶಾಖೆ. ಸಂಧ್ಯಾ ಗಿರೀಶ್ Ac No.4572500100444401 IFSC Code KARB0000457 ಜಮೆ ಮಾಡುವಂತೆ ಮನವಿ ಮಾಡಿದ್ದಾರೆ‌.

Leave a Reply

Your email address will not be published. Required fields are marked *

error: Content is protected !!