ಬ್ರಹ್ಮಾವರ: ಸರಕಾರಿ ಉದ್ಯೋಗದ ಆಮಿಷ- ವ್ಯಕ್ತಿಗೆ 35 ಲ.ರೂ ವಂಚನೆ

ಬ್ರಹ್ಮಾವರ ಜೂ.12 (ಉಡುಪಿ ಟೈಮ್ಸ್ ವರದಿ) : ಉನ್ನತ ಸರಕಾರಿ ಹುದ್ದೆ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 35 ಲಕ್ಷ ರೂ ಹಣ ಪಡೆದು ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ವಂಚನೆಗೆ ಒಳಗಾದ ಬ್ರಹ್ಮಾವರದ ಆರೂರು ಗ್ರಾಮದ ಕೃಷ್ಣ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಇವರಿಗೆ 2020ರಲ್ಲಿ ಹುಲ್ಲಪ್ಪಾ ಯಾನೆ ಕುಮಾರ್ ಎಂಬವರು ತಾನು ಅರಣ್ಯ ಮಂತ್ರಿಯವರ ವಾಹನ ಚಾಲಕನಾಗಿ ಕೆಲಸ ಮಾಡಿಕೊಂಡಿರುವುದಾಗಿ ಪರಿಚಯಿಸಿಕೊಂಡಿದ್ದ. ಬಳಿಕ ತನ್ನ ಇಬ್ಬರು ಆತ್ಮೀಯರು ಅವರು ಬೆಂಗಳೂರಿನಲ್ಲಿ ಪ್ರಭಾವ ಹೊಂದಿರುತ್ತಾರೆ ಎಂಬುದಾಗಿ ತಿಳಿಸಿದ್ದ. ಜೊತೆಗೆ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದ ಕೃಷ್ಣ ಅವರ ಮಗನಿಗೆ ಕೆಲಸದಲ್ಲಿ ಉನ್ನತ ಹುದ್ದೆಗೆ ಹೋಗಲು ಸಹಾಯ ಮಾಡುತ್ತೇವೆ ಅದಕ್ಕೆ ತುಂಬಾ ಹಣ ಖರ್ಚಾಗುತ್ತದೆ ಎಂದು ನಂಬಿಸಿದ್ದರು.

ಇದನ್ನು ನಂಬಿದ ಕೃಷ್ಣ ಅವರು ಆರೋಪಿಗಳಿಗೆ 2021 ರ ಎಪ್ರೀಲ್‌- ಮಾರ್ಚ್ 2022 ರ ಮಧ್ಯಾವದಿಯಲ್ಲಿ ಹಂತ ಹಂತವಾಗಿ ಒಟ್ಟು 35 ಲಕ್ಷ ರೂ. ಹಣವನ್ನು ನೀಡಿದ್ದಾರೆ. ಆದರೆ ಆರೋಪಿಗಳು ಪಡೆದ ಹಣವನ್ನು ನೀಡಿದೇ ಉದ್ಯೋಗವನ್ನು ನೀಡಿದೇ ವಂಚಿಸಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!