ರಾಜ್ಯ ಪೌರ ಸೇವಾ ನೌಕರರ ಸಂಘದ ಉಡುಪಿ ನಗರಸಭಾ ಶಾಖಾ ಪದಾಧಿಕಾರಿಗಳ ಆಯ್ಕೆ

ಉಡುಪಿ ಜೂ.11(ಉಡುಪಿ ಟೈಮ್ಸ್ ವರದಿ):  ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸಂಘದ ಉಡುಪಿ ನಗರಸಭಾ ಶಾಖಾ ಅಧ್ಯಕ್ಷರಾಗಿ ಸುಧಾಕರ್ ಕೋಟ್ಯನ್ ಅವರನ್ನು ಆಯ್ಕೆ ಮಾಡಲಾಗಿದೆ.

ಇತ್ತೀಚೆಗೆ ಸಗಸಭಾ ಕಚೇರಿ ಸಭಾಂಗಣದಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು,  ಉಪಾಧ್ಯಕ್ಷರಾಗಿ ಮಹೇಶ್ ಶೆಟ್ಟಿ, ಕಾರ್ಯದರ್ಶಿಯಾಗಿ ಬೇಬಿ, ಕೋಶಾಧಿಕಾರಿಯಾಗಿ ರಾಜಶ್ರೀ ಗಾಯತ್ರಿ ಎ ವಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸರೋಜಿನಿ, ಕ್ರೀಡಾ ಕಾರ್ಯದರ್ಶಿ ರಾಜೇಶ್ ಎಚ್, ಜಂಟಿ ಕಾರ್ಯದರ್ಶಿ ಪ್ರಕಾಶ್ ಪ್ರಭು, ಸಂಘಟನಾ ಕಾರ್ಯದರ್ಶಿಗಳಾಗಿ ರಾಜೇಶ್ ಎಂವಿ, ಸುದೀಪ್ ಶೆಟ್ಟಿ, ಸೌಮ್ಯ, ಯೋಗೀಶ್ ಪ್ರಭು, ಪಿ ಶಂಕರ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮನೋಹರ, ನಯನ ಭಂಡಾರ್ಕರ್, ಗಿರೀಶ್ ಆರ್ ಗಾಣಿಗ, ಲತಾ ನಾಯ್ಡು, ಪದ್ಮನಾಭ , ಸತ್ಯ ಎ ,ರಮೇಶ, ರತನ್, ಕೊಟ್ರಿ ಬಾಯಿ, ವಿಶಾಲಾಕ್ಷಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು

ಹಾಗೂ ಎಲ್ಲಾ ಶಾಖಾ ಮುಖ್ಯಸ್ಥರನ್ನು ಗೌರವ ಸಲಹೆಗಾರರಾಗಿ ಮತ್ತು ತಾಂತ್ರಿಕ ಸಲಹೆಗಾರರನ್ನಾಗಿ  ಸೀನಿಯರ್ ಪ್ರೋಗ್ರಾಮರ್ ಶರತ್ ಬಿಸಿ ಅವರನ್ನು ಆಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!