ಬೈಂದೂರು: ಕೇರಳ ಮೂಲದ ಯುವಕ ನಾಪತ್ತೆ

 ಜೂ.10(ಉಡುಪಿ ಟೈಮ್ಸ್ ವರದಿ): ಊರಿಗೆ ಹೋಗಿ ಬರುವುದಾಗಿ ತಿಳಿಸಿ ಹೋದ ಕೇರಳ ಮೂಲದ ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಕೇರಳ ರಾಜ್ಯದ ಪಾಲಕ್ಕಡ್ ಜಿಲ್ಲೆಯ ಉನ್ನಿ ಕುಟ್ಟನ್ ನಾಪತ್ತೆಯಾಗಿರುವ ಯುವಕ. ಇವರು ಕಳೆದ 1 ವರ್ಷದಿಂದ ತನ್ನ ಸೋದರ ಸಂಬಂಧಿಯೊಂದಿಗೆ ಬೈಂದೂರಿನ ಗೋಳಿಹೊಳೆ ಗ್ರಾಮದ ರಬ್ಬರ್ ತೋಟದಲ್ಲಿ ಕೆಲಸ ಮಾಡಿಕೊದ್ದರು. ಇವರು ಜೂ.8. ರಂದು ಬೆಳಿಗ್ಗೆ ತಾನು ಊರಿಗೆ (ಕೇರಳಕ್ಕೆ)  ಹೋಗಿ ಬರುವುದಾಗಿ ಹೇಳಿ ಬೈಂದೂರಿಗೆ ಹೋಗುವ ಬಸ್ ಹತ್ತಿ ಹೋಗಿದ್ದರು. ಬಳಿಕ  ಮರುದಿನ ಬೆಳಿಗ್ಗೆ ಉನ್ನಿ ಕುಟ್ಟನ್ ರವರ  ಅಣ್ಣನಾದ ರಾಜು ರವರಿಗೆ ಪೋನ್ ಮಾಡಿ ವಿಚಾರಿಸಿದಾಗ ಉನ್ನಿ ಕುಟ್ಟನ್ ಊರಿಗೆ ಬಂದಿರುವುದಿಲ್ಲ ಎಂದು ತಿಳಿಸಿದ್ದಾರೆ. ಅದರಂತೆ ಉನ್ನಿ ಕುಟ್ಟನ್ ರವರು ಊರಿಗೂ ಹೋಗದೇ ಮನೆಗೂ ವಾಪಾಸ್ಸು ಬಾರದೇ  ನಾಪತ್ತೆಯಾಗಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!