ಹೆಬ್ರಿ: ಸೊಸೆಯಿಂದ ಅತ್ತೆಗೆ ಹಲ್ಲೆ- ನಗದು ಚಿನ್ನಾಭರಣ ದರೋಡೆ, ಕೊಲೆ ಬೆದರಿಕೆ

ಹೆಬ್ರಿ ಜೂ.6 (ಉಡುಪಿ ಟೈಮ್ಸ್ ವರದಿ) : ತನಗೆ ಹಾಗೂ ತನ್ನ ಮಗನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ನಗ- ನಗದು ದೋಚಿರುವುದಾಗಿ ಸೊಸೆಯ ವಿರುದ್ದ ಅತ್ತೆ ಹೆಬ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಹೆಬ್ರಿಯ ಚಾರ ಗ್ರಾಮದ ಶಾರದಾ ಎಂಬವರು ತಮ್ಮ ಸೊಸೆ ಹಾಗೂ ಇತರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಶಾರದಾ ಅವರ ಸೊಸೆ ಕಾವೇರಿ ಹಾಗೂ ಶಿವರಾಜ, ಮಂಜುನಾಥ, ಸಂತೋಷ, ಲಲಿತಾ ಎಂಬವರು ತನಗೆ ಮತ್ತು ತನ್ನ ಮಗನಿಗೆ ಹಲ್ಲೆ ಮಾಡುವ ಉದ್ದೇಶದಿಂದ ಏಕಾಏಕಿ ಮನೆಗೆ ಪ್ರವೇಶ ಮಾಡಿ ಜೊತೆಯಲ್ಲಿ ತಂದಿದ್ದ ಮಾರಕಾಯುಧಗಳಿಂದ ಕಿಟಕಿ ಬಾಗಿಲು ಮತ್ತು ದ್ವಾರಗಳನ್ನು ದ್ವಂಸ ಮಾಡಿದ್ದಾರೆ. ಆರೋಪಿಗಳು ಮಗನನ್ನು ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ ಅಲ್ಲದೆ ಮನೆಯಲ್ಲಿದ್ದ ರೂ. 50,000  ನಗದು ಮತ್ತು ಚಿನ್ನಾಭರಣಗಳನ್ನು ದೋಚಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ಶಾರದಾ ಅವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!