ಕಾರ್ಕಳ: ಅನಾರೋಗ್ಯದ ಕಾರಣ-ವ್ಯಕ್ತಿ ಆತ್ಮಹತ್ಯೆ

ಕಾರ್ಕಳ ಜೂ.6 (ಉಡುಪಿ ಟೈಮ್ಸ್ ವರದಿ): ತಮಗಿದ್ದ ಅನಾರೋಗ್ಯದ ಕಾರಣ ಮನನೊಂದು ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಸಬಾ ಗ್ರಾಮದ ಹಿರಿಯಂಗಡಿ ಮಿತ್ತೊಟ್ಟು ಕೃಷ್ಣಗಿರಿ ಎಂಬಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ಡೇನಿಸ್ ಲೋಬೊ (62) ಮೃತಪಟ್ಟವರು. ಇವರು ಒಬ್ಬರೇ ಮನೆಯಲ್ಲಿ ವಾಸವಾಗಿದ್ದು ಹಲವು ಸಮಯದಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇದೇ ವಿಷಯದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ವಾಸದ ಮನೆಯಾದ ಕಸಬಾ ಗ್ರಾಮದ ಹಿರಿಯಂಗಡಿ ಮಿತ್ತೊಟ್ಟು ಕೃಷ್ಣಗಿರಿ ಎಂಬಲ್ಲಿ ಮನೆಯ ಎದುರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!