ಕಾರ್ಕಳ: ಹೆಚ್ಚಿನ ಲಾಭಾಂಶದ ಆಸೆಗೆ ಬಿದ್ದು 25.21 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

ಕಾರ್ಕಳ ಜೂ.6 (ಉಡುಪಿ ಟೈಮ್ಸ್ ವರದಿ): ಹೂಡಿಕೆ ಮಾಡಿ ಹೆಚ್ಚಿನ ಲಾಭಾಂಶ ಪಡೆಯುವ ಆಸೆಗೆ ಬಿದ್ದು ವ್ಯಕ್ತಿಯೊಬ್ಬರು 25.21 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಈ ಬಗ್ಗೆ ವಂಚನೆಗೆ ಒಳಗಾದ ಜಾಯ್ಸನ್ ವಿಲೀಯಂ ಡಿಸೋಜಾ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಇವರಿಗೆ ಮೋರ್ಗನ್ ಇನ್ಸಿಟುಷನ್ ಎಂಬ ಹೆಸರಿನಲ್ಲಿ ಅಪರಿಚಿತರು ಜೆಪಿಎಮ್ ಪ್ರೋ ಆಪ್ ಲಿಂಕ್ ಮತ್ತು ಎಲ್ಟಾಸ್ ಫುಡ್ ಆಪ್ ಲಿಂಕ್ ನ್ನು ಕಳುಹಿಸಿ ಲಾಭಾಂಶ ಕೊಡುವುದಾಗಿ ತಿಳಿಸಿದ್ದಾರೆ ಹಾಗೂ ಈ ಬಗ್ಗೆ ಡಿಮ್ಯಾಟ್ ಅಕೌಂಟನ್ನು ತೆರೆಸಿ ಹಂತ ಹಂತವಾಗಿ ಒಟ್ಟು ರೂ. 32,21,587/- ಹಣವನ್ನು ಅಪಾದಿತರ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಆದರೆ ಬಳಿಕ ಜಾಯ್ಸನ್ ವಿಲೀಯಂ ಡಿಸೋಜಾ ಅವರ ಖಾತೆಗೆ ರೂ 7,00,000/- ಹಣವನ್ನು ಮಾತ್ರ ಮರುವರ್ಗಾವಣೆ ಮಾಡಿ, ಉಳಿದ ರೂ. 25,21,587/- ಹಣವನ್ನು ನೀಡದೇ ವಂಚಿಸಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!