ಉಡುಪಿ: ಜೂ.15ರ ಒಳಗೆ ಬಸ್‌ಗಳ ಕರ್ಕಶ ಹಾರ್ನ್ ತೆಗೆಯಲು ಸೂಚನೆ

ಉಡುಪಿ ಜೂ.05(ಉಡುಪಿ ಟೈಮ್ಸ್ ವರದಿ): ಉಡುಪಿ ಸಿಟಿ ಬಸ್ಸು ಮಾಲಕರು ಮತ್ತು ಸರ್ವಿಸ್ ಬಸ್ಸು ಮಾಲಕರ ಸಭೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ನಡೆಯಿತು.

ಸಭೆಯಲ್ಲಿ ತಮ್ಮ ಬಸ್ಸುಗಳಿಗೆ ಅಳವಡಿಸಲಾದ ಕರ್ಕಶ  ಹಾರ್ನಗಳನ್ನು ಜೂ. 15 ರ ಒಳಗಾಗಿ ಕಡ್ಡಾಯವಾಗಿ ತೆಗೆಸಬೇಕು. ಬಸ್ಸಿನ ಒಳಗಿನ ಟೇಪ್ ರೆಕಾರ್ಡ್ ಹಾಗೂ ಸ್ಪೀಕರ್ ಗಳನ್ನು ಕಡ್ಡಾಯವಾಗಿ ತೆಗೆದು ಹಾಕಬೇಕು.  ಬಸ್ಸಿನ ಒಳಗಡೆ ಕಡ್ಡಾಯವಾಗಿ ಸಿ.ಸಿ ಕ್ಯಾಮಾರವನ್ನು ಅಳವಡಿಸುವಂತೆ ಸೂಚನೆ ನೀಡಲಾಯಿತು.

ಹಾಗೂ ಬಸ್ಸಿನ ನಿಗದಿತ ವೇಳಾಪಟ್ಟಿಯಂತೆ ಸಮಯಕ್ಕೆ ಸರಿಯಾಗಿ ಬಸ್ಸುಗಳನ್ನು ಚಲಾಯಿಸುವುದು. ಕರಾವಳಿ ಜಂಕ್ಷನ್ ನಲ್ಲಿ ಬಸ್ಸು ನಿಲ್ದಾಣಕ್ಕೆ ಹೋಗದೇ ದಾರಿಯಲ್ಲಿ ಪಿಕ್ ಆಪ್ ಮಾಡುವುದರಿಂದ ಸಾರ್ವಜನಿಕರಿಗೆ ಮತ್ತು ಇತರ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವುದರಿಂದ ಚಾಲಕರು ಬಸ್ಸು ನಿಲ್ದಾಣಕ್ಕೆ ಹೋಗಿ ಪಿಕ್ ಆಪ್ ಮಾಡುವಂತೆ  ಸೂಚಿಸಲಾಯಿತು.

ಚಾಲಕರು ಮತ್ತು ನಿರ್ವಾಹಕರು ಕರ್ತವ್ಯದ ಸಮಯ ಕಡ್ಡಾಯವಾಗಿ ಸಮವಸ್ತ್ರ  ಧರಿಸುವುದು. ವಿಪರೀತ ವೇಗವಾಗಿ ಬಸ್ಸುಗಳನ್ನು ಚಲಾಯಿಸದಂತೆ ಚಾಲಕರಿಗೆ ಸೂಚನೆ  ನೀಡುವಂತೆ ತಿಳಿಸಲಾಯಿತು. ಜೊತೆಗೆ ಬಸ್ಸು ಚಾಲಕರು ಮೊಬೈಲ್ ಪೋನ್ ಉಪಯೋಗಿಸುತ್ತಾ ಬಸ್ಸು ಚಾಲನೆ ಮಾಡದಂತೆ ಹಾಗೂ  ಬಸ್ಸು ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸದಂತೆ ಸೂಚನೆ ನೀಡಲಾಯಿತು.

ಈ  ಎಲ್ಲಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ತಪ್ಪಿದ್ದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು.

Leave a Reply

Your email address will not be published. Required fields are marked *

error: Content is protected !!