ಮಣಿಪಾಲದಲ್ಲಿ ಹಿರಿಯ ನಾಗರಿಕರಿಗೆ ಮೊಬೈಲ್ ಅಪ್ಲಿಕೇಶನ್‌ಗಳ ತರಬೇತಿ ಕಾರ್ಯಕ್ರಮ

ಮಣಿಪಾಲ, ಮೇ 25 : ರೋಟರಿ ಕ್ಲಬ್ ಮಣಿಪಾಲ್ ಹಿಲ್ಸ್‌ನಲ್ಲಿ ಹಿರಿಯ ನಾಗರಿಕರಿಗಾಗಿ ದೈನಂದಿನ ಜೀವನ (ಐಎಡಿಎಲ್) ಸಾಧನಗಳ ಚಟುವಟಿಕೆಗಳಿಗೆ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸುವ ಕುರಿತು ಪ್ರಾಯೋಗಿಕ ತರಬೇತಿ ಕಾರ್ಯಕ್ರಮ ನಡೆಯಿತು.

ಈ ವೇಳೆ ಮಾತನಾಡಿದ ಮಣಿಪಾಲ ನರ್ಸಿಂಗ್ ಕಾಲೇಜಿನ ಸಮುದಾಯ ಆರೋಗ್ಯ ನರ್ಸಿಂಗ್ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥ ಹಾಗೂ ICMR ಅನುದಾನದ ಮುಖ್ಯ ತನಿಖಾಧಿಕಾರಿ ಡಾ. ಶಶಿಧರ ವೈಎನ್ ಅವರು, ಈ ಕಾರ್ಯಕ್ರಮದ ಪರಿಚಯ ಮತ್ತು ಹಿರಿಯರ ದೈನಂದಿನ ಜೀವನದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಮೊಬೈಲ್ ಅಪ್ಲಿಕೇಶನ್‌ಗಳ ಮಹತ್ವದ ಕುರಿತಾಗಿ ಮಾಹಿತಿ ನೀಡಿದರು.

ಅಧ್ಯಯನದ ಸಹ-ಪ್ರಧಾನ ತನಿಖಾಧಿಕಾರಿ, ಹಾಗೂ ಸಂಶೋಧನಾ ಅಭ್ಯರ್ಥಿಯಾದ ವೆಲ್‌ಕಾಮ್‌ಗ್ರೂಪ್ ಗ್ರಾಜುಯೇಟ್ ಸ್ಕೂಲ್ ಆಫ್ ಹೋಟೆಲ್ ಅಡ್ಮಿನಿಸ್ಟ್ರೇಷನ್‌ನ ಪ್ರಾಧ್ಯಾಪಕರಾದ ರಾಘವೇಂದ್ರ ಜಿ ಅವರು ಸೈಬರ್ ಸುರಕ್ಷತೆ ಮತ್ತು ಸಂವಹನಕ್ಕಾಗಿ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸುವ ಕುರಿತು ಸೆಷನ್‌ಗಳನ್ನು ನಡೆಸಿಕೊಟ್ಟರು.

ಅಧಿವೇಶನದಲ್ಲಿ ಭಾಗವಹಿಸಿದ್ದ ಹಿರಿಯ ನಾಗರಿಕರು ಮೆಚ್ಚುಗೆ ಹಾಗೂ ಸಂತಸ ವ್ಯಕ್ತಪಡಿಸಿದರು. ಸಂಶೋಧನಾ ಸಿಬ್ಬಂದಿಗಳಾದ ಅಶ್ವಿನಿ ಕೆ ಮತ್ತು ಅರ್ಪಿತಾ ಅವರು ಕಾರ್ಯಕ್ರಮದಲ್ಲಿ ಅಗತ್ಯ ನೆರವು ನೀಡಿದರು. ಕಾರ್ಯಕ್ರಮದ ಸಮನ್ವಯವನ್ನು ಶ್ರೀ ರಾಘವೇಂದ್ರ ಜಿ ನಿರ್ವಹಿಸಿದರು. ಮಣಿಪಾಲದ ಚೆಫ್ಸ್ ಟಚ್‌ನಿಂದ ಆರೋಗ್ಯಕರ ಮತ್ತು ರುಚಿಕರವಾದ ಟಿಫಿನ್ ಅನ್ನು ಆನಂದಿಸಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಮಣಿಪಾಲ ಹಿಲ್ಸ್‌ನ ಅಧ್ಯಕ್ಷರಾದ ಸಿ.ರಮಾನಂದ ಭಟ್ , ಕಾರ್ಯದರ್ಶಿ ಯು.ಮಾಧವ ಮಯ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!