ಮಣಿಪಾಲ: ಗಾಂಜಾ ಸೇವನೆ- 7 ಮಂದಿ ವಿರುದ್ಧ ದೂರು

ಮಣಿಪಾಲ ಮೇ 24(ಉಡುಪಿ ಟೈಮ್ಸ್ ವರದಿ): ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿಯ ವಿರುದ್ಧ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಣಿಪಾಲ ಠಾಣಾ ಪೊಲೀಸರು  ಶಿವಳ್ಳಿ ಗ್ರಾಮದ  ಈಶ್ವರ್‌ ನಗರದ  ಸಾರ್ವಜನಿಕ ಸ್ಥಳದಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಅಮಲಿನಲ್ಲಿ ಇದ್ದಂತೆ ಕಂಡು ಬಂದ ಸಿದ್ದಾರ್ಥ (21), ರಾಜದೀಪ (22), ವಿ ಕ್ರಿಶ್‌ (20), ಗಂಗಮ್‌ ವಾಣಿಶ್ರೀ (20), ಶಾಂತರಾಮ (20), ಸುಜಯ್ (21), ರಾಫೆಲ್ (21) ಎಂಬ 7 ಮಂದಿಯನ್ನು ಗಾಂಜಾ ಸೇವಿಸಿರುವ ಅನುಮಾನದ ಮೇರೆಗೆ ವಶಕ್ಕೆ ಪಡೆದು ಮಣಿಪಾಲದ ಫಾರೆನ್ಸಿಕ್ ವಿಭಾಗದ ವೈದ್ಯರ ಬಳಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದರು. ಈ 7 ಮಂದಿಯ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟ ಕಾರಣ ಇವರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ 7 ಪ್ರತ್ಯೇಕ ಪ್ರಕರಣ ದಾಖಲಾಗಿದೆ. 

Leave a Reply

Your email address will not be published. Required fields are marked *

error: Content is protected !!