ಅಲೆವೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ- ನೂತನ ಅಧ್ಯಕ್ಷರಾಗಿ ಪ್ರಕಾಶ್ ಭಟ್ ಆಯ್ಕೆ

ಅಲೆವೂರು ಮೇ 20(ಉಡುಪಿ ಟೈಮ್ಸ್ ವರದಿ): ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಪ್ರಕಾಶ್ ಭಟ್ ಅವರು ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಸಮಿತಿಯ ಕಾರ್ಯಾಲಯದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಶೇಖರ ಕಲ್ಮಾಡಿ ಇವರು ಉಸ್ತುವಾರಿಯಲ್ಲಿ ೪೦ನೇ ವರ್ಷದ ಪದಾಧಿಕಾರಿಗಳ ಆಯ್ಕೆ ನಡೆಯಿತು.  ಈ ವೇಳೆ ಸಮೀತಿಯ ಗೌರವಾಧ್ಯಕ್ಷರಾಗಿ ಉಮೇಶ ಜಿ.ಶೆಟ್ಟಿ, ಶೇಖರ ಕಲ್ಮಾಡಿ, ಕಾರ್ತಿಕ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಸಿ.ಪೈ, ಕೋಶಾಧಿಕಾರಿಯಾಗಿ ಚಂದ್ರಹಾಸ ಪೈ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಮರನಾಥ ಶೆಟ್ಟಿ, ಹಾಗೂ ಉಪಾಧ್ಯಕ್ಷರಾಗಿ  ಮಹಾಬಲ ಪೂಜಾರಿ, ಅನಿಲ್ ಕುಮಾರ್ ಬಿ.ಶೆಟ್ಟಿ, ರಮೇಶ್ ನಾಯ್ಕ್, ರಮಾನಂದ ನಾಯಕ್, ಪುಷ್ಪರಾಜ್, ಭಾಸ್ಕರ ಶೆಟ್ಟಿ, ಅಶೋಕ್ ಕುಮಾರ್, ಜಗದೀಶ್ವರ್, ಚಂದ್ರಶೇಖರ ಶೆಟ್ಟಿ ಕೊರಂಗ್ರಪಾಡಿ, ಜೊತೆ ಕಾರ್ಯದರ್ಶಿಯಾಗಿ ಆಕಾಶ್ ಪೂಜಾರಿ, ಶ್ರೀ ಕರುಣಾಕರ ಪೂಜಾರಿ, ಶ್ರೀ ಗಣೇಶ್ ಕುಂದರ್ ಅವರನ್ನು ಆಯ್ಕೆ ಮಾಡಲಾಯಿತು.

ಹಾಗೂ ಜೊತೆ ಕೋಶಾಧಿಕಾರಿಯಾಗಿ ಯತೀಶ್ ಕುಮಾರ್, ವಿಶ್ವಾಸ್ ಪೂಜಾರಿ, ಸುಖೇಶ್ ನಾಯಕ್, ಜೊತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುರೇಶ್ ಕುಮಾರ್,  ಗೋಪಾಲ್ ಜಿ., ಉಮೇಶ್ ಪೂಜಾರಿ,  ಪ್ರಶಾಂತ್ ಹೆಗ್ಡೆ, ದಿನೇಶ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿಯಾಗಿ  ರಾಜೇಂದ್ರ ನಾಯ್ಕ್, ಸುಂದರ ಪೂಜಾರಿ, ಕ್ರಿಶ್ ಹೆಚ್.ಶೆಟ್ಟಿ, ಯಶಸ್ ನಾಯ್ಕ್, ಸುಂದರ ಸೇರಿಗಾರ್, ಶ್ರೀಪಾದ್, ಕೃಷ್ಣ ನಾಯ್ಕ್, ಸಭಾಂಗಣ ನಿರ್ವಾಹಕರಾಗಿ ಜಲೇಶ್ ಶೆಟ್ಟಿ, ದಿನೇಶ್ ಪೂಜಾರಿ, ರಾಜೇಶ್ ಶೆಟ್ಟಿ, , ಮೋಹನ್ ಶೆಟ್ಟಿ, ಆಯುಷ್ ಅವರನ್ನು ಆಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!