ಉಡುಪಿ: ವ್ಯಕ್ತಿ ನಾಪತ್ತೆ
ಉಡುಪಿ ಸೆ.11(ಉಡುಪಿ ಟೈಮ್ಸ್ ವರದಿ): ಕುಂಜಿಬೆಟ್ಟುವಿನ ಕಂಪನಿಯೊಂದರ ಗೋಡಾನ್ನಲ್ಲಿ ಲೋಡ್ ಮತ್ತು ಅನ್ಲೋಡ್ ಮಾಡುವ ಕೆಲಸದ ಕಾರ್ಮಿಕರೊಬ್ಬರು ನಿನ್ನೆ ಬೆಳಿಗ್ಗೆಯಿಂದ ಕಾಣೆಯಾಗಿದ್ದಾರೆ.
ಪ್ರಶಾಂತ್ ಬಂಗೇರ ನಾಪತ್ತೆಯಾಗಿರುವವರು. ಇವರು ಉಡುಪಿಯ ಕುಂಜಿಬೆಟ್ಟುವಿನ ಕಂಪೆನಿಯೊಂದರ ಗೋಡಾನ್ನಲ್ಲಿ ಲೋಡ್ ಮತ್ತು ಅನ್ಲೋಡ್ ಮಾಡುವ ಕೆಲಸ ಮಾಡಿಕೊಂಡಿದ್ದರು. ನಿನ್ನೆ ರಜೆ ಇದ್ದ ಕಾರಣ ಬೆಳಿಗ್ಗೆ ಮನೆಯಿಂದ ಹೋದವರು ವಾಪಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಸ್ವೀಚ್ ಆಫ್ ಆಗಿದ್ದು ಮನೆಯವರ ಸಂಪರ್ಕಕ್ಕೆ ಸಿಗದೆ ಕಾಣೆಯಾಗಿದ್ದಾರೆ ಎಂಬುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.