ಮಣಿಪಾಲ: 29.05 ಲ.ರೂ.ಮೌಲ್ಯದ ಚಿನ್ನ-ವಜ್ರಾಭರಣ, ನಗದಿನೊಂದಿಗೆ ಮನೆ ಕೆಲಸದಾಳುಗಳು ಪರಾರಿ

ಮಣಿಪಾಲ ಸೆ.9(ಉಡುಪಿ ಟೈಮ್ಸ್ ವರದಿ): ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದಲ್ಲಿ ಮನೆಯೊಂದರಲ್ಲಿ ಕೆಲಸದವರೇ 29.05 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ವಜ್ರಾಭರಣಗಳ ಸಹಿತ ನಗದು ಹಾಗೂ ಜಾಗದ ದಾಖಲೆಗಳನ್ನು ಕದ್ದು ಪರಾರಿಯಾಗಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.

ಸ್ಥಳೀಯ ನಿವಾಸಿ ರಕ್ಷಾ ವಿ ಶೆಟ್ಟಿ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಸೆ.8 ರ ಬೆಳಿಗ್ಗೆ ಮನೆಯ ಕೋಣೆಯಲ್ಲಿದ್ದ 2 ಲಕ್ಷ ರೂ. ನಗದು, ಕೆಲವು ಜಾಗದ ದಾಖಲಾತಿಗಳ ಸಹಿತ ಚಿನ್ನ ಹಾಗೂ ವಜ್ರಾಭರಣಗಳಿರುವ 2 ಲಾಕರ್‌ಗಳನ್ನು ಮನೆಯ ಕೆಲಸದಾಳುಗಳಾದ ರಾಜು ಮತ್ತು ಗೀತಾ ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಚಿನ್ನಾಭರಣ ಹಾಗೂ ವಜ್ರಾಭರಣಗಳ ಮೌಲ್ಯ  29.5 ಲಕ್ಷ ಆಗಿರುತ್ತದೆ ಎಂಬುದಾಗಿ ರಕ್ಷಾ ವಿ.ಶೆಟ್ಟಿ ಅವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!