ಪೌರ ಕಾರ್ಮಿಕರ ಮೇಲೆ ಹಲ್ಲೆ: ಆರೋಪಿಗಳಿಬ್ಬರ ಬಂಧನ

ಉಡುಪಿ:(ಉಡುಪಿ ಟೈಮ್ಸ್ ವರದಿ) ಕಸ ವಿಲೇವಾರಿ ವಿಚಾರವಾಗಿ ನಗರ ಸಭೆಯ ಪೌರ ಕಾರ್ಮಿಕರೊಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನೇಜಾರಿನ ಇಸ್ಮಾಯಿಲ್ (55) ಹಾಗೂ ಹೂಡೆಯ ಸುಹೈಲ್ (28) ಬಂಧಿತ ಆರೋಪಿಗಳು.

ಬಾಗಲಕೋಟೆ ಮೂಲದ ನಿಟ್ಟೂರು ನಿವಾಸಿ ಸಂಜು ಮಾದರ್ (26) ಹಲ್ಲೆಗೊಳಗಾದ ಕಾರ್ಮಿಕ, ಇಂದು ಸಂಜು ಅವರು ಇತರ ಪೌರ ಕಾ ರ್ಮಿಕರೊಂದಿಗೆ ಕಸ ವಿಲೇವಾರಿಗೆ ಉಡುಪಿಯ ಅಂಗಡಿಗೆ ತೆರಳಿದ್ದರು. ಈ ವೇಳೆ ಸಿಟಿ ಬಸ್ ಸ್ಟಾಂಡ್ ಸಮೀಪದ ಆಸ್ಮಾ ಎಲೆಕ್ಟ್ರಾನಿಕ್ಸ್ ಅಂಗಡಿಯೊಂದರಲ್ಲಿ ಹಸಿ ಮತ್ತು ಒಣ ಕಸ ಬೆರೆಸಿರುವುದನ್ನು ಸಂಜು ಪ್ರಶ್ನಿಸಿದ್ದರು ಈ ವೇಳೆ ಅಂಗಡಿಯವರು ದರ್ಪದಿಂದ ಪ್ರತಿಕ್ರಿಯೆ ನೀಡಿದ್ದು ಕಾರ್ಮಿಕರು ಮತ್ತು ಅಂಗಡಿವರ ನಡುವೆ ವಾಗ್ವಾದ ನಡೆದಿದೆ.

ಅಲ್ಲದೆ ಇಸ್ಮಾಯಿಲ್ ಮತ್ತು ಸುಹೈಲ್ ಇಬ್ಬರು ಸಂಜುವಿಗೆ ಬೈದಿದ್ದು ಮಾತ್ರವಲ್ಲದೆ ಹಲ್ಲೆ ನಡೆಸಿದ್ದಾರೆ. ಇಷ್ಟೇ ಅಲ್ಲದೆ ನಗರ ಸಭೆಯ ಅಧಿಕಾರಿಗಳು ಬಂದ ವೇಳೆ ಅವರ ಎದುರಲ್ಲೇ ಕಾರ್ಮಿಕರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಪ್ರಕರಣಕ್ಕೆ ಸಂಬಂದಿಸಿ ಪ್ರಕರಣ ದಾಖಲಿ ಸಿಕೊಂಡ ಉಡುಪಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!