ಮಣಿಪಾಲ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲ್ಲೆ

ಮಣಿಪಾಲ ಮಾ.29 (ಉಡುಪಿ ಟೈಮ್ಸ್ ವರದಿ): ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಹೊಡೆದು ಹಲ್ಲೆ ನಡೆಸಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.

ವೆಂಕಟೇಶ್ ನಾಯ್ಕ್ ಇವರು ಮಾ.17 ರಂದು ಮೇಯಲು ಬಿಟ್ಟಿದ್ದ ದನಗಳು ವಾಪಾಸು ಬಾರದೇ ಇದ್ದುದ್ದರಿಂದ ಹುಡುಕಿಕೊಂಡು ರಾತ್ರಿ ಅಲೆವೂರು –ಜೋಡುರಸ್ತೆ ಸಂತೆ ನಡೆಯುವ ಸ್ಥಳಕ್ಕೆ ಬಂದು ಅಲ್ಲೆ ಇದ್ದ ಸ್ಟೇಜ್ ಹಿಂಬದಿ ಕುಳಿತ್ತಿದ್ದಾಗ ಅವರ ಪರಿಚಯದ ಆಪಾದಿತ ನಿತಿನ್ ಹಾಗೂ ಇನ್ನೋರ್ವ ವ್ಯಕ್ತಿ ಬಂದು ಏಕಾಏಕಿ ಹೊಡೆದು ಹಲ್ಲೆ ನಡೆಸಿ ಮಚ್ಚಿನಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!