ಮಹಾರಾಷ್ಟ್ರ : ಮಾಜಿ ಕೇಂದ್ರ ಸಚಿವ ಹಂಸರಾಜ್ ಅಹಿರ್ ಅವರ ಸೋದರ ಮಗ ಮತ್ತು ಆತನ ಸ್ನೇಹಿತನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಮಹಾರಾಷ್ಟ್ರ ಮಾ.23: ಮಾಜಿ ಕೇಂದ್ರ ಸಚಿವ ಹಂಸರಾಜ್ ಅಹಿರ್ ಅವರ ಸೋದರ ಮಗ ಮತ್ತು ಆತನ ಆಪ್ತ ಸ್ನೇಹಿತನ ಮೃತದೇಹ ಚಂಡೀಗಢದ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮಾಜಿ ಕೇಂದ್ರ ಸಚಿವ ಹಂಸರಾಜ್ ಅಹಿರ್ ಅವರ ಸೋದರ ಮಗ ಮಹಾರಾಷ್ಟ್ರದ ಚಂದ್ರಾಪುರ ನಿವಾಸಿ ಮಹೇಶ್ ಅಹಿರ್ (26) ಮತ್ತು ಅವರ ಆಪ್ತ ಸ್ನೇಹಿತ ಹರೀಶ್ ಧೋಟೆ (27) ಮೃತಪಟ್ಟವರು. ಮಹೇಶ್ ಅವರು ಮಾಜಿ ಸಚಿವ ಹಂಸರಾಜ್ ಅಹಿರ್ ಅವರ ಹಿರಿಯ ಸಹೋದರ ಹರಿಶ್ಚಂದ್ರ ಅಹಿರ್ ಅವರ ಮಗ.

ಮೂಲಗಳ ಪ್ರಕಾರ ಮಾರ್ಚ್ 14 ರಂದು ಉಜ್ಜಯಿನಿಗೆ ಹೋಗುವುದಾಗಿ ಹೇಳಿ ಇಬ್ಬರೂ ಮನೆಯಿಂದ ಹೊರಟಿದ್ದರು. ಆದರೆ ಅವರು ಉಜ್ಜಯಿನಿಗೆ ತೆರಳಲಿಲ್ಲ. ಇಬ್ಬರ ಸುಳಿವು ಇಲ್ಲದ ಕಾರಣ ಕುಟುಂಬದ ಸದಸ್ಯರು ಮಾ.15 ರಂದು ಚಂದ್ರಾಪುರ ಪೊಲೀಸರಿಗೆ ಕಾಣೆಯಾದ ಬಗ್ಗೆ ದೂರನ್ನು ಸಲ್ಲಿಸಿದ್ದರು.

ಪೊಲೀಸರು ಹರಿದ್ವಾರದಲ್ಲಿ ಅವರ ಮೊಬೈಲ್ ಲೊಕೇಶನ್ ಪತ್ತೆಹಚ್ಚಿದರು ಮತ್ತು ಕುಟುಂಬದ ಸದಸ್ಯರು ಹುಡುಕಾಟ ನಡೆಸಿಕೊಂಡು ಉತ್ತರಾಖಂಡಕ್ಕೂ ತೆರಳಿದ್ದರು. ಚಂಡೀಗಢ ಪೊಲೀಸರ ಪ್ರಕಾರ, ಸೆಕ್ಟರ್ 52 ರ ಅರಣ್ಯದ ಪ್ಯಾಚ್‌ನಲ್ಲಿ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಇಬ್ಬರು ವ್ಯಕ್ತಿಗಳು ಮರಗಳಿಗೆ ನೇತಾಡುತ್ತಿರುವುದನ್ನು ದಾರಿಹೋಕ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು, ಅವರು ಇಬ್ಬರನ್ನು ಸರ್ಕಾರಿ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಬರುವಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಸ್ಥಳದಲ್ಲಿ ದೊರೆತ ದಾಖಲೆಗಳಿಂದ ಇಬ್ಬರ ಗುರುತು ಪತ್ತೆ ಹಚ್ಚಿದ ಪೊಲೀಸರು ಅವರ ಕುಟುಂಬ ಸದಸ್ಯರನ್ನು ಸಂಪರ್ಕಿಸಿದ್ದಾರೆ. 

ಮೃತ ವ್ಯಕ್ತಿಯ ಪ್ರಯಾಣದ ಟಿಕೆಟ್‌ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ಬುಧವಾರ ಬೆಳಗ್ಗೆ ಡೆಹ್ರಾಡೂನ್‌ನಿಂದ ಬಸ್‌ನಲ್ಲಿ ಇಬ್ಬರೂ ಚಂಡೀಗಢ ತಲುಪಿದ್ದಾರೆ ಎಂದು ಸೂಚಿಸಿದೆ. ಸ್ಥಳದಲ್ಲಿ ಮದ್ಯದ ಬಾಟಲಿ ಮತ್ತು ಗ್ಲಾಸ್‌ಗಳು ಪತ್ತೆಯಾಗಿದೆ. ದೇಹಗಳ ಮೇಲೆ ಯಾವುದೇ ಬಾಹ್ಯ ಗಾಯದ ಗುರುತುಗಳು ಕಂಡುಬಂದಿಲ್ಲ ಹಾಗೂ ಸೆಕ್ಟರ್ 43ರ ಅಂತರರಾಜ್ಯ ಬಸ್ ಟರ್ಮಿನಲ್ ಬಳಿಯ ಅಂಗಡಿಯಿಂದ ಪಡೆದ ಸಿಸಿಟಿವಿ ದೃಶ್ಯಾವಳಿಗಳು ಇಬ್ಬರು ವ್ಯಕ್ತಿಗಳು ಹಗ್ಗಗಳನ್ನು ಖರೀದಿಸುತ್ತಿರುವುದನ್ನು ತೋರಿಸಿದೆ. ನಾವು ಎಲ್ಲಾ ಕೋನಗಳಿಂದ ಪ್ರಕರಣವನ್ನು ತನಿಖೆ ಮಾಡುತ್ತಿದ್ದೇವೆ ಎಂದು ನೈಋತ್ಯ ವಿಭಾಗದ ಡಿಎಸ್ಪಿ ಚರಂಜೀತ್ ಸಿಂಗ್ ವಿರ್ಕ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!