ಬ್ರಹ್ಮಾವರ: ರಸ್ತೆ ವಿಚಾರಕ್ಕೆ ಹಲ್ಲೆ, ಜೀವ ಬೆದರಿಕೆ – ದೂರು ದಾಖಲು
ಬ್ರಹ್ಮಾವರ ಮಾ.18(ಉಡುಪಿ ಟೈಮ್ಸ್ ವರದಿ) : ತಾಲೂಕಿನ ಕಚ್ಚೂರು ಗ್ರಾಮದಲ್ಲಿ ರಸ್ತೆ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ನೆರೆಮನೆಯವರು ಹೊಡೆದು ಜೀವ ಬೆದರಿಕೆ ಹಾಕಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ ತಾಲೂಕಿನ ಕಚ್ಚೂರು ಗ್ರಾಮದ ಬಾರಕೂರು ಸ.ನಂ 9 & 10 ಬಿ ರಲ್ಲಿ ಹಾದು ಹೋಗುವ ರಸ್ತೆಯ ವಿಚಾರದಲ್ಲಿ ಸ್ಥಳೀಯ ಶಂಕರ ಪೂಜಾರಿ ಯಾನೆ ಶಂಕರ ಶಾಂತಿ ಹಾಗೂ ಅವರ ನೆರೆಮನೆಯವರಾದ ಆರೋಪಿತೆ ಶಾಂತ ಕೆ. ಶೆಟ್ಟಿ ಹಾಗೂ ಅವರ ಮಕ್ಕಳಾದ ಆರೋಪಿ ಸಂದೀಪ ಶೆಟ್ಟಿ ಮತ್ತು ಆರೋಪಿ ಸಚಿನ್ ಶೆಟ್ಟಿ ಯವರಲ್ಲಿ ಬಿನ್ನಾಭಿಪ್ರಾಯ ವಿದೆ. ಅಲ್ಲದೆ ಇದೇ ವಿಚಾರದಲ್ಲಿ ಪದೇ ಪದೇ ಜಗಳವಾಗಿರುತ್ತದೆ. ನಿನ್ನೆ ಶಂಕರ ಪೂಜಾರಿ ಅವರು, ಕಚ್ಚೂರು ಗ್ರಾಮದ ಕಾಳಿಕಾಂಬ ದೇವಸ್ಥಾನದ ಹತ್ತಿರ ಇರುವ ತಮ್ಮ ಮನೆಯಿಂದ ಬಾರಕೂರು ಪೇಟೆಗೆ ಹೋಗುತ್ತಿರುವಾಗ ಬೆಳಿಗ್ಗೆ ಆರೋಪಿ ಸಂದೀಪ ಶೆಟ್ಟಿಯು ಕಬ್ಬಿಣದ ರಾಡ್ಯನ್ನು ಹಿಡಿದುಕೊಂಡು ಬಂದು ಇವರನ್ನು ಅಡ್ಡಗಟ್ಟಿ ದೂಡಿ, ಹೊಡೆದು ಹಲ್ಲೆ ನಡೆಸಿದ್ದಾರೆ. ಈ ಗಲಾಟೆಯಲ್ಲಿ ಶಂಕರ ಪೂಜಾರಿ ಅವರಿಗೆ ಆರೋಪಿ ಕೈಯಲ್ಲಿ ಇದ್ದ ಕಬ್ಬಿಣದ ರಾಡ್ ತಾಗಿ ಗಾಯವಾಗಿದ್ದು, ಈ ವೇಳೆ ಆರೋಪಿಗಳು ಶಂಕರ ಪೂಜಾರಿ ಅವರಿಗೆ ಜೀವ ಬೆದರಿಕೆ ಹಾಕಿ ಹೋಗಿದ್ದಾರೆ ಎಂಬುದಾಗಿ ಶಂಕರ ಪೂಜಾರಿ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.