ಉಡುಪಿ: ನೇತ್ರ ಜ್ಯೋತಿ ಕಾಲೇಜಿಗೆ ಮೂರು ರ‍್ಯಾಂಕ್‌

ಕೀರ್ತನಾ,ರಮ್ಯಾ ಕೆ ಖಾರ್ವಿ,ವೀಣಾ ನಾಯಕ್‌

ಉಡುಪಿ ಮಾ.18(ಉಡುಪಿ ಟೈಮ್ಸ್ ವರದಿ): ಪ್ರಸಾದ್‌ ನೇತ್ರಾಲಯ ಉಡುಪಿ ಇದರ ಅಂಗ ಸಂಸ್ಥೆಯಾದ ನೇತ್ರ ಜ್ಯೋತಿ ಅರೆ ವೈದ್ಯಕೀಯ ವಿಜ್ಞಾನ ವಿದ್ಯಾಲಯ ಉಡುಪಿ ಇದರ ಮೂರು ಮಂದಿ ವಿದ್ಯಾರ್ಥಿನಿಯರು 2022 ರಲ್ಲಿ ರಾಜೀವ್‌ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯವು ನಡೆಸಿರುವ ಪದವಿ ಪರೀಕ್ಷೆಗಳಲ್ಲಿ ರಾಜ್ಯ ರ‍್ಯಾಂಕ್‌ ಪಡೆದಿರುತ್ತಾರೆ.

ವಿದ್ಯಾರ್ಥಿಗಳಾದ ಕೀರ್ತನಾ ಅವರು   ಆಸ್ಪತ್ರೆ ಆಡಳಿತೆ ಪದವಿ  (Bachelor in Hospital Administration)ಯಲ್ಲಿ  ಏಳನೆ ರ‍್ಯಾಂಕ್‌  ಪಡೆದಿದ್ದು,  ರಮ್ಯಾ ಕೆ ಖಾರ್ವಿ ಅವರು ಬಿಎಸ್‌ಸಿ ಆಪ್ಟೋಮೆಟ್ರಿ  ಎಂಟನೆ ರ‍್ಯಾಂಕ್‌ ಹಾಗೂ ವೀಣಾ ನಾಯಕ್‌ ಅವರು ಆಸ್ಪತ್ರೆ ಆಡಳಿತೆ ಪದವಿ  (Bachelor in Hospital Administration)ಯಲ್ಲಿ ಎಂಟನೆ ರ‍್ಯಾಂಕ್‌ ಪಡೆದಿದ್ದಾರೆ.

ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಕೃಷ್ಣ ಪ್ರಸಾದ್‌ ಕೂಡ್ಲುರವರು ರ‍್ಯಾಂಕ್‌ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!