ವಿಶ್ವಸಂಸ್ಥೆಯಲ್ಲಿ ಕನ್ನಡ ನುಡಿ ಮೊಳಗಿಸಿದ ರಿಷಭ್‌ ಶೆಟ್ಟಿ- ಮೆಚ್ಚುಗೆಯ ಮಹಾಪೂರ-ಸಿಎಂರಿಂದ ಶಹಬ್ಬಾಶ್ ಗಿರಿ

ಮಂಗಳೂರು ಮಾ.17 : ಜಿನೇವಾದ ವಿಶ್ವಸಂಸ್ಥೆಯಲ್ಲಿ ಕನ್ನಡದ ಕಾಂತಾರ ಚಿತ್ರ ಪ್ರದರ್ಶನ ಕಂಡಿದ್ದು, ಅಲ್ಲಿ ಚಿತ್ರದ ನಿರ್ದೇಶಕ, ನಟ ರಿಷಭ್ ಶೆಟ್ಟಿ ಅವರು ಪ್ರೇಕ್ಷಕರನ್ನು ಉದ್ದೇಶಿಸಿ ಕನ್ನಡದಲ್ಲೇ ಮಾತನಾಡಿದ್ದು ಭಾರೀ ಪ್ರಶಂಸೆಗೆ ಪಾತ್ರವಾಗಿದೆ. 

ವಿಶ್ವಸಂಸ್ಥೆಯಲ್ಲಿ ಕನ್ನಡ ಧ್ವನಿಯನ್ನು ಮೊಳಗಿಸಿದ ರಿಷಬ್‌ ಶೆಟ್ಟಿ ಅವರಿಗೆ ಜಗತ್ತಿನ ಮೂಲೆಮೂಲೆಗಳಿಂದ ಲಕ್ಷಾಂತರ ಕನ್ನಡಿಗರಿಂದ ಅಭಿನಂದನೆ, ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

ಇದೀಗ ರಿಷಭ್‌ ಶೆಟ್ಟಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಸಿಎಂ ಬೊಮ್ಮಾಯಿ ಅವರು, ಹೆಮ್ಮೆಯ ಕನ್ನಡಿಗನೊಬ್ಬ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿ  ಕನ್ನಡದಲ್ಲಿ ಮಾತನಾಡಿರುವುದು ನಿಜಕ್ಕೂ ಅದ್ಭುತ. ಅಭಿನಂದನೆಗಳು. ರಿಷಬ್‌, ನಿಮ್ಮ ಕನ್ನಡ ಪ್ರೇಮಕ್ಕೆ ಹೃದಯಾಂತರಾಳದಿಂದ ಗೌರವ ಅರ್ಪಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!