ಕುಂದಾಪುರ: ಕ್ಷುಲ್ಲಕ ಕಾರಣಕ್ಕೆ ಸಂಬಂಧಿಕರ ಮೆಲೆ ಹಲ್ಲೆ-ದೂರು ದಾಖಲು

ಕುಂದಾಪುರ ಮಾ.14(ಉಡುಪಿ ಟೈಮ್ಸ್ ವರದಿ) :ತಾಲೂಕಿನ ಕುಂಬಾಶಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸಂಬಂಧಿಕರ ಮೆಲೆಯೇ ಹಲ್ಲೆ ನಡೆಸಿರುವ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಹಲ್ಲೆಗೆ ಒಳಗಾದ ಅಣ್ಣಯ್ಯ ಯಾನೆ ರಾಘವೇಂದ್ರ ಅವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಇವರು ಮಾ.13 ರಂದು ಸಂಜೆ ವೇಳೆ ಕುಂಭಾಶಿ ಗ್ರಾಮದ ಅಯ್ಯಪ್ಪ ದೇವಸ್ಥಾನದ ಬಳಿ ಇರುವ ಮೈದಾನದಲ್ಲಿ ಇರುವಾಗ ಅಲ್ಲೇ ನಿಂತುಕೊಂಡಿದ್ದ ತಮ್ಮ ಸಂಬಂದಿಕರಾದ ಗಣೇಶ್‌ ಮತ್ತು ಗೋವರ್ಧನ್‌ ರವರಲ್ಲಿ ಮನೆಯ ಮಕ್ಕಳಿಗೆ ಮತ್ತು ನೆರೆಯವರಿಗೆ ಕುಡಿದು ಬಂದು ಅವಾಚ್ಯವಾಗಿ ಯಾಕೆ ಬೈಯುತ್ತಿರಾ ಎಂದು ಕೇಳಿದ್ದರು.

ಇದರಿಂದ ಕೋಪಗೊಂಡ ಗಣೇಶನು ಅಣ್ಣಯ್ಯ ಅವರಿಗೆ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿ ಹೋಗಿದ್ದನು. ನಂತರ ರಾತ್ರಿ ಸುಮಾರು 8:30ರ ಸುಮಾರಿಗೆ ಅಣ್ಣಯ್ಯ ಅವರು ತಮ್ಮ ಅಕ್ಕನ ಮಗ ವಿಜಯನ ಮನೆಯ ಅಂಗಳದಲ್ಲಿ ನಿಂತಿರುವಾಗ ಆಪಾದಿತ ಗಣೇಶ್‌, ಗೋವರ್ಧನ್‌ ಮತ್ತು ಇತರರು ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ಅಣ್ಣಯ್ಯ ಅವರಿಗೆ ಬೈದು ಚಾಕುವಿನಿಂದ ಬೀಸಿದ್ದು, ಆಗ ಅಣ್ಣಯ್ಯ ಅವರು ತಪ್ಪಿಸಿಕೊಳ್ಳುವ ಭರದಲ್ಲಿ ಬಿದ್ದು ತಲೆಗೆ ಚಾಕು ತಾಗಿ ಗಾಯವಾಗಿದೆ. ಈ ವೇಳೆ ಗೋವರ್ಧನನು ಅಣ್ಣಯ್ಯ ಅವರಿಗೆ ಹೊಡೆದು ಹಲ್ಲೆ ನಡೆಸಿದ್ದು, ಬಿಡಿಸಲು ಬಂದ ತಮ್ಮ ರಾಜೇಂದ್ರನಿಗೂ ಹೊಡೆದಿದ್ದಾರೆ. ಅಲ್ಲದೇ ಮನೆಯ ಮಾಡಿಗೆ ಕಲ್ಲಿನಿಂದ ಹೊಡೆದು ಹಂಚುಗಳಿಗೂ ಹಾನಿ ಮಾಡಿರುತ್ತಾರೆ.

ಈ ವೇಳೆ ಮನೆ ಮಂದಿ ಬರುವುದನ್ನು ನೋಡಿ ಜೀವ ಬೆದರಿಕೆ ಹಾಕಿ ಆರೋಪಿಗಳು ಅಲ್ಲಿಂದ ಓಡಿ ಹೋಗಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!