ರಾಯಚೂರು :ಚಾಲಕನ ಸಮಯ ಪ್ರಜ್ಞೆ, ತಪ್ಪಿದ ಭಾರಿ ದುರಂತ

ಕಡತ ಚಿತ್ರ

ರಾಯಚೂರು :ವಾಯುವ್ಯ ಸಾರಿಗೆ ಬಸ್‌ನ ಬ್ರೇಕ್ ಫೇಲ್ ಆಗಿ ನಡೆಯುತ್ತಿದ್ದ ಭಾರಿ ಅನಾಹುತವೊಂದು ಚಾಲಕನ ಸಮಯ ಪ್ರಜ್ಞೆಯಿಂದರೂ ತಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಬಾಗಲಕೋಟೆಯಿಂದ ರಾಯಚೂರಿಗೆ 60 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದ ವಾಯುವ್ಯ ಸಾರಿಗೆ ಬಸ್ ಲಿಂಗಸುಗೂರು ತಾಲೂಕಿನ ಬುದ್ದಿನ್ನಿ ಬಳಿ ಬರುತ್ತಿದ್ದಂತೆ ಬ್ರೇಕ್ ಫೇಲ್ ಆಗಿತ್ತು.

ಒಂದೆಡೆ ಬಸ್‌ನಲ್ಲಿದ್ದ ಪ್ರಯಾಣಿಕರು ಆತಂಕಗೊಂಡಿದ್ದರೆ ಮತ್ತೊಂದೆಡೆ ಚಾಲಕ ಮಾತ್ರ ಧೈರ್ಯದಿಂದಲೇ ನಿಯಂತ್ರಣ ಕಳೆದುಕೊಂಡಿದ್ದ ಬಸ್ ನ್ನು ರಸ್ತೆ ಪಕ್ಕದಲ್ಲಿನ ಗುಂಡಿಗೆ ಇಳಿಸಿದ್ದಾನೆ. ಇದರಿಂದಾಗಿ ಬಸ್ ಇಳಿಜಾರಿಗೆ ಹೋಗಿ ನಿಂತಿದೆ. ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಈ ಮೂಲಕ ಚಾಲಕನ ಸಮಯ ಪ್ರಜ್ಞೆಯಿಂದ ಸಾಂಭವ್ಯ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಇದೀಗ ಬಸ್ ಚಾಲಕನ ಧೈರ್ಯ ಹಾಗೂ ಸಮಯ ಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!