ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಹಿರಿಯಡ್ಕದ ಅರುಣಕಲಾ ಎಸ್. ರಾವ್ ಆಯ್ಕೆ

ಉಡುಪಿ ಫೆ.2 (ಉಡುಪಿ ಟೈಮ್ಸ್ ವರದಿ) : ವಾರಣಾಸಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾ ಕೂಟಕ್ಕೆ ಹಿರಿಯಡ್ಕದ ಬೊಮ್ಮಾರಬೆಟ್ಟುವಿನ ಗುಡ್ಡೆಯಂಗಡಿ ನಿವಾಸಿ ಅರುಣ ಕಲಾ ಎಸ್ ರಾವ್ ಅವರು ಆಯ್ಕೆಯಾಗಿದ್ದಾರೆ.

ಅರುಣ ಕಲಾ ಎಸ್ ರಾವ್ ಅವರು 4ನೇ ಕರ್ನಾಟಕ ರಾಜ್ಯ ಮಾಸ್ಟರ್ಸ್ ಗೇಮ್ಸ್ ಎಸೋಸಿಯೇಶನ್-2023 ರವರು ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಕ್ರೀಡಾಕೂಟದಲ್ಲಿ 5000 ಮೀ. ನಡಿಗೆ, 5000 ಮೀ. ಓಟ, 1500 ಮೀ. ಓಟದಲ್ಲಿ ಪ್ರಥಮ ಸ್ಥಾನಗಳಿಸಿ 3 ಚಿನ್ನದ ಪದಕ ಪಡೆದಿರುತ್ತಾರೆ. 4×100 ರಿಲೇ, 400×100 ಮಿಕ್ಸ್‍ಡ್ ರಿಲೇಯಲ್ಲಿ ದ್ವಿತೀಯ ಸ್ಥಾನಗಳಿಸಿ ಎರಡು ಬೆಳ್ಳಿ ಪದಕ ಗಳಿಸಿರುತ್ತಾರೆ. ಹೀಗೆ ಮೂರು ಚಿನ್ನ, 2 ಬೆಳ್ಳಿ ಪದಕದೊಂದಿಗೆ ವಾರಣಾಸಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾ ಕೂಟಕ್ಕೆ ಅವರು ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!