ಉಡುಪಿ: ಫೆ.3-5 ರಂದು ದೇಸಿ ನಾಯಿ, ಬೆಕ್ಕುಗಳಿಗೆ ಉಚಿತ ಸಂತಾನ ಹರಣ ಶಸ್ತ್ರಚಿಕಿತ್ಸೆ

ಉಡುಪಿ ಜ.30 (ಉಡುಪಿ ಟೈಮ್ಸ್ ವರದಿ) : ಸೇವ್ ಅವರ್ ಸ್ಟ್ರೆಸ್ ಮುಂಬೈ ಇದರ ಮಂಜುಳಾ ಕರ್ಕೇರ ಹಾಗೂ ಪಶುಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳು ಉಡುಪಿ ಇದರ ಪ್ರಾಯೋಜಕತ್ವದಲ್ಲಿ ಮಲ್ಪೆಯ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ ವತಿಯಿಂದ ಎಲ್ಲಾ ದೇಸಿ ನಾಯಿಗಳು ಮತ್ತು ಬೆಕ್ಕುಗಳಿಗೆ ಉಚಿತ ಸಂತಾನ ಹರಣ ಶಸ್ತ್ರಚಿಕಿತ್ಸೆಯು ಫೆ.3, 4 ಮತ್ತು 5 ರಂದು ಉಡುಪಿಯ ಬೈಲೂರಿನಲ್ಲಿ ನಡೆಯಲಿದೆ.

ಉಡುಪಿಯ ಕೊರಂಗ್ರಪಾಡಿಯಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಮೂರು ದಿನಗಳ ಕಾಲ ನಡೆಯುವ ಈ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ತಮ್ಮ ಮನೆಯ ದೇಸಿ ನಾಯಿ ಅಥವಾ ಬೆಕ್ಕುಗಳನ್ನು ಕರೆದುಕೊಂಡು ಹೋಗಲು 8277390909 ಸಂಖ್ಯೆಗೆ ನೋಂದಾಯಿಸುವಂತೆ ಸೂಚನೆ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!