ಶೋಷಿತ ಸಮುದಾಯ, ಮುಸ್ಲಿಮ್ ಸಾಹಿತ್ಯಾಸಕ್ತರನ್ನು ಹೊರಗಿಟ್ಟು ರಾಜಕೀಯ: ಬಿ.ಕೆ ಹರಿಪ್ರಸಾದ್

ಹಾವೇರಿ, ಜ.9 : ಜಿಲ್ಲಾ ಕೇಂದ್ರದಲ್ಲಿ ನಡೆದ 86ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ವೇದಿಯಲ್ಲಿಯೇ ಮುಸ್ಲಿಂ ಹಾಗೂ ತಳ ಸಮುದಾಯವನ್ನು ಸಮ್ಮೇಳನದಿಂದ ದೂರವಿರಿಸಲಾಗಿದೆ ಎಂಬ ಅಸಮಾಧಾನ ಹೊರ ಬಿದ್ದಿದೆ.

ಸಮ್ಮೇಳನದ ಸಮಾರೋಪ ಸಮಾರಂಭದ ವೇದಿಯಲ್ಲಿ ಮಾತನಾಡಿದ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು, ಕನ್ನಡ ಸಾಹಿತ್ಯ ಪರಿಷತ್ತು ಪರಿಷತ್ ಮುಸ್ಲಿಮ್ ಸಾಹಿತಿಗಳು ಸೇರಿದಂತೆ ತಳ ಸಮುದಾಯಗಳನ್ನು ದೂರವಿರಿಸಿ ರಾಜಕೀಯ ಮಾಡಿದೆ ಎಂದು ಇದಕ್ಕೆ ಪುಷ್ಠಿ ನೀಡುವಂತೆಯೇ ಆಹ್ವಾನ ಪತ್ರಿಕೆಯೇ ಇದೆ ಎಂದು ಹೇಳಿದರು.

ಇದೇ ವೇಳೆ ಬಿ.ಕೆ.ಹರಿಪ್ರಸಾದ್ ಅವರ ಮಾತಿಗೆ ಸಮಾಜಾಯಿಸಿ ನೀಡಿದ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಮಹೇಶ್ ಜೋಶಿ ಸವರು, ನಾನು ಸಂತ ಶಿಶುನಾಳ ಶರೀಫರ ನಾಡಿನಲ್ಲಿ ನಿಂತಿದ್ದು, ಮುಸ್ಲಿಮರಿಗೆ ಅನ್ಯಾಯ ಮಾಡಿದು ಉಂಟಾ. ಅಲ್ಲದೆ, ಈ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮುಸ್ಲಿಮರಿಗೆ ಅವಕಾಶ ಕೊಟ್ಟಿದ್ದು, ಅದನ್ನು ದಾಖಲೆ ಸಮೇತ ನಾನು ಹೇಳುವೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!