ಈಶ್ವರಪ್ಪ ಅವರು ಬಾಯಿ ತೆರೆದರೆ ಉದುರುವುದು ಅಶ್ಲೀಲ ಮತ್ತು ದ್ವೇಷದ ನುಡಿಗಳೇ : ಕಾಂಗ್ರೆಸ್

ಬೆಂಗಳೂರು, ಜ.5 : 40% ಗೆ ಒಂದು ತಲೆ ತೆಗೆದ ಕಮಿಷನ್ ಗಿರಾಕಿ ಕೆ.ಎಸ್ ಈಶ್ವರಪ್ಪ ಅವರು ಬಾಯಿ ತೆರೆದರೆ ಉದುರುವುದು ಅಶ್ಲೀಲ ಮತ್ತು ದ್ವೇಷದ ನುಡಿಗಳೇ ಎಂದು ಕಾಂಗ್ರೆಸ್ ಟೀಕಿಸಿದೆ.

ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ “40% ಗೆ ಒಂದು ತಲೆ ತೆಗೆದ ಕಮಿಷನ್ ಗಿರಾಕಿ ಕೆ.ಎಸ್ ಈಶ್ವರಪ್ಪ ಅವರು ಬಾಯಿ ತೆರೆದರೆ ಉದುರುವುದು ಅಶ್ಲೀಲ ಮತ್ತು ದ್ವೇಷದ ನುಡಿಗಳೇ. ಶಾಂತಿ ಇದ್ದರೆ ಬಿಜೆಪಿ ಬೇಳೆ ಬೇಯುವುದಿಲ್ಲ, ಏಕೆಂದರೆ ಬಿಜೆಪಿಗೆ ದ್ವೇಷ ಬಿಟ್ಟು ಅಭಿವೃದ್ಧಿಪರ ಯೋಚನೆಗಳಿಲ್ಲ. ರಸ್ತೆ ಗುಂಡಿಗಳಿಗೆ ಉರುಳಿದ ತಲೆಗಳು, ಕಮಿಷನ್ ಕಿರುಕುಳಕ್ಕೆ ಹೋದ ಜೀವಗಳ ಇವರಿಗೆ ಲೆಕ್ಕವಿಲ್ಲ” ಎಂದು ಆರೋಪಿಸಿದೆ.

“ಸಮಾಜದಲ್ಲಿನ ಲೋಪಗಳನ್ನು ಅರಿಯಲಾಗದ, ಅಭಿವೃದ್ಧಿಪರ, ಆಡಳಿತಾತ್ಮಕ ಚಿಂತನೆಗಳು ತಿಳಿಯದ ಬಿಜೆಪಿ ನಾಯಕರಿಗೆ ತಿಳಿದಿರುವುದು ದ್ವೇಷ ಬಿತ್ತುವುದೊಂದೇ. ಕಾಂಗ್ರೆಸ್ ಸರ್ಕಾರವಿದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು ಎಂದಿದ್ದ “ದ್ವೇಷದ ಕ್ವಾರಿಯ ಮಾಲೀಕ” ಸಂಸದ ತೇಜಸ್ವಿ ಸೂರ್ಯ ಗೆ ತಿಳಿದಿದ್ದು ಎರಡೇ, ದ್ವೇಷ ಹಾಗೂ ದೋಸೆ” ಎಂದು ವ್ಯಂಗ್ಯವಾಡಿದೆ.

“ಪಂಪ್ ವೆಲ್ ಮೇಲ್ಸೇತುವೆಯನ್ನು ನಿಗದಿಯಂತೆ ಪೂರ್ಣಗೊಳಿಸಲಾಗದ ನಳಿನ್ ಕುಮಾರ್ ಕಟೀಲ್ ಅವರು ಸೂರತ್ಕಲ್ ಟೋಲ್ ಗೇಟ್ ವಿಚಾರದಲ್ಲಿ ಕರಾವಳಿಗರ ಕಿವಿ ಮೇಲೆ ಹೂವಿಟ್ಟಂತೆ ಈಗ ಮತ್ತೊಂದು ಲವ್ ಜಿಹಾದ್ ಹೂವು ಇಡಲು ಹೊರಟಿದ್ದಾರೆ. ಅಭಿವೃದ್ಧಿ ಆದ್ಯತೆಯಲ್ಲ ಎಂದು ಗಂಟಾಘೋಷವಾಗಿ ಹೇಳಿರುವ ಬಿಜೆಪಿಯನ್ನು ಜನ ಈಗಾಗಲೇ ತಿರಸ್ಕರಿಸಿಯಾಗಿದೆ” ಎಂದು ಹೇಳಿದೆ.

Leave a Reply

Your email address will not be published. Required fields are marked *

error: Content is protected !!