ಭೋಪಾಲ್:ಸೀಬೆ ಹಣ್ಣು ತಿಂದಿದ್ದೀರಾ? ಪ್ರಶ್ನಿಸಿದ್ದಕ್ಕೆ ಮನನೊಂದು ವೃದ್ದೆ ಆತ್ಮಹತ್ಯೆ

ಭೋಪಾಲ್:  ಮೊಮ್ಮಗಳ ಮಾತಿನಿಂದ ಮನನೊಂದ ಅಜ್ಜಿಯೊಬ್ಬರು ಆ್ಯಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಇಂದೋರ್‍ನಲ್ಲಿ ನಡೆದಿದೆ. ಮೀರಾ ಬಾಯಿ (75) ಆತ್ಮಹತ್ಯೆ ಮಾಡಿಕೊಂಡಿರುವ ವೃದ್ಧೆ. 

ಅಜ್ಜಿ ಮೊಮ್ಮಗಳು ಒಟ್ಟಿಗೆ ಕುಳಿತಿದ್ದ ವೇಳೆ ಐದು ವರ್ಷದ ಮೊಮ್ಮಗಳು ಅಜ್ಜಿಯ ಬಳಿ ಎಲ್ಲಾ ಸೀಬೆ ಹಣ್ಣನ್ನು ನೀವು ತಿಂದಿದ್ದೀರಿ ಎಂದು ಹೇಳಿದ್ದಾಳೆ. ಇದಕ್ಕೆ ಕೋಪಗೊಂಡ ಅಜ್ಜಿ ನಾನು ತಿಂದಿಲ್ಲ ನೀವು ನನ್ನನ್ನು ಕೆಣಕುತ್ತಿದ್ದೀರಿ ಎಂದು ಹೇಳುತ್ತಾ ಆ್ಯಸಿಡ್ ಕುಡಿದರು.

ಈ ವೇಳೆ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾರೆ ಎಂದು ಮೃತ ವೃದ್ಧೆಯ ಮಗ ಕೈಲಾಶ್  ಹೇಳಿದ್ದಾರೆ. ಇನ್ನು ಈ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸುವುದಾಗಿ ಬೆಟ್ಮಾ ಪೊಲೀಸರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!