ಕಾರ್ಕಳ: ವಿದೇಶದಿಂದ ಬಂದ ವ್ಯಕ್ತಿ ಬೆಳ್ಮಣ್ ನಲ್ಲಿ ಮೃತ್ಯು

ಕಾರ್ಕಳ ಡಿ.2: ತಾಲೂಕಿನ ಬೆಳ್ಮಣ್ ವಿನಲ್ಲಿ ವಿದೇಶದಿಂದ ಬಂದಿದ್ದ ವ್ಯಕ್ತಿ ಸಾವನ್ನಪಿದ ಘಟನೆ ನಡೆದಿದೆ.

ರಿತೇಶ್ ನೀಲ್ ಮೊಂತೆರೋ (35) ಮೃತಪಟ್ಟ ವ್ಯಕ್ತಿ.

ರಿತೇಶ್ ದುಬೈನಲ್ಲಿ ಉದ್ಯೋಗ ಮಾಡಿಕೊಂಡಿದ್ದು ಇತ್ತೀಚೆಗೆ ಊರಿಗೆ ಬಂದಿದ್ದರು. ಕೆಲ ದಿನಗಳ ಹಿಂದೆ ಮೂಡುಬಿದಿರೆಯಲ್ಲಿ ನಾದಿನಿಯ ಮನೆಯ ಅಂಗಳದಲ್ಲಿ ಆಕಸ್ಮಿಕವಾಗಿ ಬಿದ್ದುಗಾಯಗೊಂಡಿದ್ದರು. ಬಳಿಕ ಅವರು ಚಿಕಿತ್ಸೆ ಪಡೆದು ಬೆಳ್ಮಣ್ ನ ತನ್ನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.

ಆದರೆ ನ.30 ರಂದು ರಾತ್ರಿ ಊಟ ಮಾಡಿ ಮಲಗಿದ್ದವರನ್ನು ಬೆಳಿಗ್ಗೆ ಎಬ್ಬಿಸಿದಾಗ ಅವರು ಮಾತನಾಡದೇ ಇದ್ದೂದನ್ನು ಕಂಡು, ಕೂಡಲೇ ಅವರನ್ನು ಉಪಚರಿಸಿ ಬೆಳ್ಮಣ್ ನಿನ ವೈದ್ಯರನ್ನು ಮನೆಗೆ ಕರೆಸಿ ತೋರಿಸಿದಾಗ ವೈದ್ಯರು ರಿತೇಶ್ ಅವರು ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!