ಉಡುಪಿ: ಮತ ಎಣಿಕೆ ಕೇಂದ್ರದಲ್ಲಿ ಲಘು ಲಾಠಿ ಪ್ರಹಾರ

ಉಡುಪಿ (ಉಡುಪಿ ಟೈಮ್ಸ್ ವರದಿ): ಎರಡು ತಂಡಗಳ ಮದ್ಯೆ ಕ್ಷುಲಕ ಕಾರಣಕ್ಕೆ ಜಗಳ ಪ್ರಾರಂಭವಾಗಿ ಪೊಲೀಸರು ಲಘು ಲಾಠಿ ಚಾರ್ಜ್ ಮಾಡುವುದರ ಮೂಲಕ ತಂಡಗಳನ್ನು ಚದುರಿಸಿದ ಘಟನೆ ನಗರದ ಮತ ಎಣಿಕೆ ಕೇಂದ್ರದಲ್ಲಿ ಇಂದು ರಾತ್ರಿ(ಡಿ 30 ) ನಡೆದಿದೆ.

16 ಗ್ರಾಮ ಪಂಚಾಯತ್ ನ ಮತ ಎಣಿಕೆ ಸಂತ ಸಿಸಿಲೀಸ್ ನಲ್ಲಿ ಸಂಪೂರ್ಣಗೊಳ್ಳಲು 2 ಪಂಚಾಯತ್ ಬಾಕಿ ಇದ್ದಿದ್ದು,ಮತ ಎಣಿಕೆ ಕೇಂದ್ರದಲ್ಲಿ ಇದ್ದ ಪೆರ್ಡೂರು ಹಾಗೂ ಬಡ ನಿಡಿಯೂರು ತಂಡಗಳ ನಡುವೆ ಮಾತಿನ ಚಕಮಕಿ ನಡೆಯಿತು, 2 ತಂಡಗಳು ಕೈಕೈ ಮಿಲಾಯಿಸದವು.

ಈ ಸಂದರ್ಭ ಪೋಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಳಿಸಲಾಯಿತು. ಆದರೆ ಅದರ ನಂತರ ಮತ್ತೊಮೆ ಬಂದ ಪೆರ್ಡೂರಿನ ಯುವಕರು ತಮ್ಮ ವಾಚ್ ಕಳೆದು ಹೋಗಿದ್ದರ ಕುರಿತು ಮತ್ತೊಮೆ ಗಲಾಟೆ ಆರಂಭವಾಗಿ, ಪೊಲೀಸರೊಂದಿಗೆ ವಾಗ್ವಾದ ಪ್ರಾರಂಭವಾಯಿತು. ನಂತರ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿ ತಂಡ ಚದುರಿಸಿದರು.

Leave a Reply

Your email address will not be published. Required fields are marked *

error: Content is protected !!