ಕುಂದಾಪುರ: ವ್ಯಕ್ತಿ ನಾಪತ್ತೆ
ಕುಂದಾಪುರ ಡಿ.1 (ಉಡುಪಿ ಟೈಮ್ಸ್ ವರದಿ) : ಆನಗಳ್ಳಿಯಿಂದ ಕೆಲಸಕ್ಕಾಗಿ ಸಾಗರಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ವ್ಯಕ್ತಿಯೊಬ್ಬರು ವಾಪಾಸು ಮನೆಗೆ ಬಾರದೆ ಅ.31 ರಿಂದ ನಾಪತ್ತೆಯಾಗಿದ್ದಾರೆ.
ವಿಘ್ನೇಶ್ವರ ಪೂಜಾರಿ (37) ನಾಪತ್ತೆಯಾದವರು.
ಇವರು ಮಂಗಳೂರು, ಸಿದ್ದಾಪುರ, ಹೊಸನಗರ ಮುಂತಾದ ಕಡೆಗಳಲ್ಲಿ ಅಲ್ಯೂಮಿನಿಯಮ್ ಕೆಲಸ ಮಾಡಿಕೊಂಡಿದ್ದು, ಅ.31 ರಂದು ಆನಗಳ್ಳಿಯಿಂದ ಕೆಲಸಕ್ಕಾಗಿ ಸಾಗರಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಾಸು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೆ, ಇತ್ತ ತಾವು ಕೆಲಸ ಮಾಡುತ್ತಿದ್ದ ಸಾಗರದ ಸ್ಥಳಕ್ಕೂ ತೆರಳದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾದ ವಿಘ್ನೇಶ್ವರ ಪೂಜಾರಿ ಅವರ ಪತ್ನಿ ಜ್ಯೋತಿ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.