ಕೊಡವೂರು: ಹಿರಿಯ ದಂಪತಿಗಳಿಗೆ ಸನ್ಮಾನ
ಉಡುಪಿ ಡಿ.1 (ಉಡುಪಿ ಟೈಮ್ಸ್ ವರದಿ) : ಬ್ರಾಹ್ಮಣ ಮಹಾ ಸಭಾ ಕೊಡವೂರು ಇದರ ವತಿಯಿಂದ ಹಿರಿಯ ದಂಪತಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ನಿಮಿತ್ತ ಹಿರಿಯ ವೈದ್ಯ ಡಾ.ಹರಿಪ್ರಸಾದ್ ಐತಾಳ್ ಅವರನ್ನು ಅವರ ಗೃಹದಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಅವರು, ಬ್ರಾಹ್ಮಣರಿಗೆ ಬ್ರಾಹ್ಮಣ್ಯವೇ ಶಕ್ತಿ ದೇವತಾರಾಧನೆ ಮಾಡುತ್ತಾ ಎಲ್ಲರಿಗೂ ಸುಖವನ್ನು ಹಾಗೂ ಒಳ್ಳೆಯದನ್ನು ಬಯಸುವನೇ ಬ್ರಾಹ್ಮಣನಾಗಿದ್ದು ಅನಾದಿ ಕಾಲದಿಂದಲೂ ಯಾವುದೇ ಮೀಸಲಾತಿಯ ಬಗ್ಗೆ ತಲೆಕೆಡಿಸಿಕೊಳ್ಳದೆ, ಯಾವುದೇ ನಿಂದನೆ ಅಪಹಾಸ್ಯಕ್ಕೆ ಕುಗ್ಗದೆ ತನ್ನ ಧೀಶಕ್ತಿಯೊಂದಿಗೆ ಬದುಕುತ್ತಿರುವ ಬ್ರಾಹ್ಮಣರು ತಮ್ಮ ತಮ್ಮ ಅಸ್ತಿತ್ವಕ್ಕಾಗಿ ಸಂಘಟಿತರಾಗಬೇಕು ಎಂದು ಕರೆ ನೀಡಿದರು. ಹಾಗೂ ಬ್ರಾಹ್ಮಣ ಮಹಾ ಸಭಾ ಕೊಡವೂರು ತನ್ನ ಸಮುದಾಯಕ್ಕೆ ಹಾಗೂ ಸಮಾಜಕ್ಕೆ ಮಾಡುತ್ತಿರುವ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.
ಲಕ್ಷ್ಮೀ ನಾರಾಯಣ ಭಟ್ ಹಾಗೂ ರಮಾ ಲಕ್ಷ್ಮೀನಾರಾಯಣ ದಂಪತಿಗಳು ಹಿರಿಯ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀನಿವಾಸ ಉಪಾಧ್ಯಾಯ, ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ, ಮಂಜುನಾಥ ಭಟ್, ಶ್ರೀಶ ಭಟ್, ಚಂದ್ರಶೇಖರ ರಾವ್, ಶ್ರೀನಿವಾಸ ಬಾಯರಿ, ಅನಂತ ಪದ್ಮನಾಭ ಭಟ್, ಮುರಳೀಧರ್ ಭಟ್ ನಾಗರಾಜ್, ಶುಭಾ ಉಪಸ್ಥಿತರಿದ್ದರು.