ಮಲ್ಪೆ: ರಿಕ್ಷಾ ಚಾಲಕನಿಗೆ ಇಬ್ಬರಿಂದ ಹಲ್ಲೆ

ಮಲ್ಪೆ ನ.30 (ಉಡುಪಿ ಟೈಮ್ಸ್ ವರದಿ) : ಕಡೆಕಾರು ಜಂಕ್ಷನ್ ನಲ್ಲಿ ರಿಕ್ಷಾ ಚಾಲಕರೊಬ್ಬರಿಗೆ ಇಬ್ಬರು ಸೇರಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಅರವಿಂದ ಡಿ ಸಾಲ್ಯಾನ್ (44) ಹಲ್ಲೆಗೊಳಗಾದವರು. ಇವರು ಕಡೆಕಾರುವಿನ ಜಂಕ್ಷನ್ ನಲ್ಲಿ ರಿಕ್ಷಾ ಇಟ್ಟುಕೊಂಡಿದ್ದು. ಇವರಿಗೆ ನೆರೆಮನೆಯ ನಿವಾಸಿ ರಕ್ಷಿತ್ ರವರು ಇತ್ತಿಚಿಗೆ ಕೆಲವು ದಿನಗಳಿಂದ ರಿಕ್ಷಾ ನಿಲ್ದಾಣಕ್ಕೆ ಬಂದು ತೊಂದರೆ ನೀಡುತ್ತಿದ್ದನು. ನ.28 ರಂದು ಮಧ್ಯಾಹ್ನದ ವೇಳೆ ಕಡೆಕಾರು ಜಂಕ್ಷನ್ ನಲ್ಲಿ ಇರುವಾಗ ರಕ್ಷಿತ್ ಮತ್ತು ಇನ್ನೊಬ್ಬ ವ್ಯಕ್ತಿ ಅಲ್ಲಿಗೆ ಬಂದು ಅರವಿಂದ ಅವರನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ರಕ್ಷಿತ್ ನು ಕಬ್ಬಿಣದ ರಾಡಿನಿಂದ ಹೊಡೆದು ಹಲ್ಲೆ ನಡೆಸಿದ್ದಾನೆ. ಹಾಗೂ ಇನ್ನೊಬ್ಬ ವ್ಯಕ್ತಿ ಇಟ್ಟಿಗೆ ಯಿಂದ ತಲೆಗೆ ಹೊಡೆದು ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂಬುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಅರವಿಂದ ಡಿ.ಸಾಲ್ಯಾನ್ ಅವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!