ಹೆಜಮಾಡಿಯಲ್ಲಿ ಸುರತ್ಕಲ್ ಟೋಲ್ ಸಂಗ್ರಹಕ್ಕೆ ವಿರೋಧ: ಡಿ.2 ರಂದು ಸಾಮೂಹಿಕ ಹೋರಾಟಕ್ಕೆ ಚಾಲನೆ
ಉಡುಪಿ ನ.30(ಉಡುಪಿ ಟೈಮ್ಸ್ ವರದಿ): ಸುರತ್ಕಲ್ ನ ಅಕ್ರಮ ಟೋಲ್ ಸುಂಕವನ್ನು ಹೆಜಮಾಡಿ ಟೋಲ್ ನಲ್ಲಿ ಸಂಗ್ರಹಿಸುವುದನ್ನು ಕೈಬಿಡುವಂತೆ ಆಗ್ರಹಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮೀತಿ ಹಾಗೂ ಉಡುಪಿ ,ದ.ಕ ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳು ಹಮ್ಮಿಕೊಂಡಿರುವ ಸಾಮೂಹಿಕ ಧರಣಿ ಹೋರಾಟಕ್ಕೆ ಡಿ.2 ರಂದು ಹೆಜಮಾಡಿ ಟೋಲ್ ಗೇಟ್ ಸಮೀಪ ಚಾಲನೆ ನೀಡಲಾಗುವುದು ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದ್ದು, ಡಿ.2 ರಂದು ಬೆಳಿಗ್ಗೆ 9.30 ರಿಂದ ಈ ಹೋರಾಟ ಆರಂಭಗೊಳ್ಳಲಿದ್ದು, ಈ ಹೋರಾಟದ ಧರಣಿಯಲ್ಲಿ ಹೆಜಮಾಡಿ ಟೋಲ್ ಸುಲಿಗೆಗೆ ಅವಕಾಶ ಒದಗಿಸಿದ ಬಿಜೆಪಿ ಸಂಸದ ಶಾಸಕರು ರಾಜಿನಾಮೆ ನೀಡಬೇಕು ಎಂದು ಹಾಗೂ ಸುರತ್ಕಲ್ ಅಕ್ರಮ ಟೋಲ್ ನ ಸುಂಕವನ್ನು ಹೆಜಮಾಡಿಯಲ್ಲಿ ಸಂಗ್ರಹಿಸುವ ಸರಕಾರದ ಆದೇಶವನ್ನು ಕೈಬಿಡುವಂತೆ ಒತ್ತಾಯಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.