ಕುಂದಾಪುರ: ತೆಂಗು ಮತ್ತು ನಾರಿನ ಘಟಕದಲ್ಲಿ ಕಳ್ಳತನ

ಕುಂದಾಪುರ ನ.29 (ಉಡುಪಿ ಟೈಮ್ಸ್ ವರದಿ): ತಾಲೂಕಿನ ವಕ್ವಾಡಿಯಲ್ಲಿರುವ ತೆಂಗು ಮತ್ತು ನಾರಿನ ಘಟಕದಲ್ಲಿ 50 ಸಾವಿರ ರೂ ಮೌಲ್ಯದ ವಸ್ತುಗಳ ಕಳ್ಳತನ ನಡೆದಿರುವ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಮದಾಸ ಬುದ್ ವಂತ ಗಾವಂಕರ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಕಳೆದ 2 ವರ್ಷಗಳಿಂದ ಬಂದ್ ಮಾಡಲಾಗಿರುವ ಘಟಕದಲ್ಲಿ ನ.22 ರ ರಾತ್ರಿಯಿಂದ ನ.23 ರ ಬೆಳಿಗ್ಗಿನ ಅವಧಿಯಲ್ಲಿ ಕಳ್ಳರು ತೆಂಗು ಮತ್ತು ನಾರಿನ ಉತ್ಪಾದನಾ ಕೇಂದ್ರಕ್ಕೆ ಸಂಬಂದಿಸಿದ ಕೊಳವೆ ಬಾವಿಯ ಸ್ಟಾರ್ಟರ್, ಮತ್ತು ಕೇಬಲ್ ವಯರ್ ಸೇರಿದಂತೆ 50,000 ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!