ಉಡುಪಿ: ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ
ಉಡುಪಿ ನ.18 (ಉಡುಪಿ ಟೈಮ್ಸ್ ವರದಿ) : ಕೆಲಸಕ್ಕೆಂದು ಹೋದ ವ್ಯಕ್ತಿ ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿರುವ ಘಟನೆ ಉಡುಪಿಯ ಬೀಡಿನಗುಡ್ಡೆ ಪರಿಸರದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ, ಪ್ರಸ್ತುತ ಬೀಡಿನಗುಡ್ಡೆಯ ಗುಂಡುಶೆಟ್ಟಿ ಕಂಪೌಂಡ್ ನಿವಾಸಿ ಮೇಘಪ್ಪ ಚವ್ಹಾಣ್ (46) ನಾಪತ್ತೆಯಾದವರು.
ಬೀಡಿನಗುಡ್ಡೆ ಪರಿಸರದಲ್ಲಿ ಪತ್ನಿಯೊಂದಿಗೆ ವಾಸವಿದ್ದವರು ನ.15 ರಂದು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆಂದು ಹೋಗಿದ್ದರು. ಆದರೆ ವಾಪಾಸು ಮನೆಗೆ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದಾರೆ. ಈ ಬಗ್ಗೆ ನಾಪತ್ತೆಯಾಗಿರುವ ಮೇಘಪ್ಪ ಚವ್ಹಾಣ್ ಅವರ ಪತ್ನಿ ಮುತ್ತವ್ವ ಚವ್ಹಾಣ್ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.