ಉಡುಪಿ :ಬಾಲಕನ ಮೇಲೆ ಜೇನುನೊಣಗಳ ದಾಳಿ

ಉಡುಪಿ(ಉಡುಪಿ ಟೈಮ್ಸ್ ವರದಿ): ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿ ಜೇನು ನೊಣಗಳ‌ ದಾಳಿ ಹೆಚ್ಚಾಗಿ ನಡೆಯುತ್ತಿದ್ದೂ ಜೇನು ನೊಣ ಕಚ್ಚಿದ ಪರಿಣಾಮ‌ ಬಾಲಕನೋರ್ವ ಅಸ್ವಸ್ಥಗೊಂಡ ಘಟನೆ ಇಂದು ಬೆಳಗ್ಗೆ ಉಡುಪಿಯ ಚಿಟ್ಪಾಡಿ ಸಮೀಪ ನಡೆದಿರುವುದಾಗಿ ವರದಿಯಾಗಿದೆ.

ಅಸ್ವಸ್ಥಗೊಂಡ ಬಾಲಕನನ್ನು ಬಾಗಲಕೋಟೆ ಮೂಲದ ಪುಂಡಲೀಕ ಎಂದು ಗುರುತಿಸಲಾಗಿದೆ. ಗುಂಪು ಗುಂಪಾಗಿ ಬಂದ ಜೇನು ನೊಣಗಳು ಬಾಲಕನ ಮೇಲೆ ದಾಳಿ ಮಾಡಿದ್ದು, ಬಳಿಕ ಅವರನ್ನು ರಕ್ಷಿಸಿರುವ ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹ್ಮದ್ ಹೆಚ್ಚಿನ ಚಿಕಿತ್ಸೆಗೆ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!