ಹೈದರಾಬಾದ್ ಗೆ ಕೆಲಸಕ್ಕೆ ಹೋದ ಉದ್ಯಾವರದ ಯುವಕ ಸಂಪರ್ಕಕ್ಕೆ ಸಿಗದೆ ನಾಪತ್ತೆ

ಕಾಪು ನ.15 (ಉಡುಪಿ ಟೈಮ್ಸ್ ವರದಿ) : ಹೈದರಾಬಾದ್ ನಲ್ಲಿರುವ ಕರೀಮ್ ನಗರಕ್ಕೆ ಕೆಲಸಕ್ಕೆ ಹೋದ ಉದ್ಯಾವರದ ಪಿತ್ರೋಡಿಯ ಯುವಕನೋರ್ವ ಮನೆಗೆ ಬಾರದೆ ಫೋನ್ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿರುವುದಾಗಿ ಕಾಪು ಠಾಣೆಯಲ್ಲಿ ದೂರು ದಾಖಲಾಗಿದೆ.

ಪಿತ್ರೋಡಿ ನಿವಾಸಿ ಸುಜಿತ್ (26) ನಾಪತ್ತೆಯಾದವರು.

ಇವರು ಎ.29 ರಂದು ಬೆಳಿಗ್ಗೆ ಕೆಲಸಕ್ಕೆಂದು ಹೈದರಾಬಾದ್‍ನಲ್ಲಿರುವ ಕರೀಮ್ ನಗರಕ್ಕೆ ಹೋಗಿದ್ದರು. ಕೆಲಸಕ್ಕೆ ಹೋದ 4 ತಿಂಗಳವರೆಗೆ ಅವರು ತಮ್ಮ ಚಿಕ್ಕಮ್ಮನಿಗೆ ಕರೆ ಮಾಡಿ ಮಾತಾನಾಡುತ್ತಿದ್ದರು. ಆದರೆ ಕೆಲಸಕ್ಕೆ ಹೋದ ನಂತರ ಮನೆಗೆ ಬಂದಿರುವುದಿಲ್ಲ. ಹಾಗೂ ಇತ್ತೀಚೆಗೆ 2 ತಿಂಗಳಿನಿಂದ ಅವರು ಮನೆಗೂ ಯಾವುದೇ ಕರೆ ಮಾಡಿರುವುದಿಲ್ಲ. ಅಲ್ಲದೆ ಅವರಿಗೆ ಕರೆ ಮಾಡಿದ್ದಲ್ಲಿ ಮನೆಯವರಿಗೂ ಅವರು ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ. ಈ ಬಗ್ಗೆ ಸುಜಿತ್ ಅವರ ಚಿಕ್ಕಮ್ಮ ಶಾರದ ಅವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!