ಕಮಿಷನ್‍ಗೂ ಪ್ರಮೋಷನ್ ಕೊಟ್ಟ ದೇಶದ ಏಕೈಕ ಸರ್ಕಾರ ಬೊಮ್ಮಾಯಿಯವರದ್ದು: ದಿನೇಶ್ ಗುಂಡು ರಾವ್

ಬೆಂಗಳೂರು, ಅ.25 : “ಮೊದಲು 40% ಕಮಿಷನ್ ಇದ್ದದ್ದು ಈಗ 50% ಕಮಿಷನ್ ಆಗಿದೆ. ಕಮಿಷನ್‍ಗೂ ಪ್ರಮೋಷನ್ ಕೊಟ್ಟ ದೇಶದ ಏಕೈಕ ಸರ್ಕಾರ ಬೊಮ್ಮಾಯಿಯವರದ್ದು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡು ರಾವ್ ಅವರು ವ್ಯಂಗ್ಯವಾಡಿದ್ದಾರೆ.

40% ಕಮಿಷನ್ ಆರೋಪ ಕುರಿತಾಗಿ ಸರಣಿ ಟ್ವೀಟ್ ಮಾಡಿ ಸರಕಾರವನ್ನು ಟೀಕಿಸಿರುವ ಅವರು, ” ಮೊದಲು 40% ಕಮಿಷನ್ ಇದ್ದದ್ದು ಈಗ 50% ಪಸೆರ್ಂಟ್ ಕಮಿಷನ್ ಆಗಿದೆ. ಕಮಿಷನ್ ಗೂ ಪ್ರಮೋಷನ್ ಕೊಟ್ಟ ದೇಶದ ಏಕೈಕ ಸರ್ಕಾರ ಬೊಮ್ಮಾಯಿಯವರದ್ದು. ಇತ್ತೀಚೆಗೆ ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ಮೇಲೆ ಕಮಿಷನ್ ಪಸರ್ಂಟೇಜ್ ಜಾಸ್ತಿಯಾದಂತಿದೆ. ಬೊಮ್ಮಾಯಿಯವರೆ, ದೆಹಲಿಗೆ ಕಪ್ಪ ಕಾಣಿಕೆ ಸಲ್ಲಿಸಲು ಈ ಕಮಿಷನ್ ರೇಟ್ ಜಾಸ್ತಿಯಾಯಿತೆ ಎಂದು ಪ್ರಶ್ನಿಸಿದ್ದಾರೆ.

ಬಿಎಸ್ ಬೊಮ್ಮಯಿಯವರೇ, ಮುಂದಿನ ತಿಂಗಳು ಪ್ರಧಾನಿ ಮೋದಿ ಮಂಗಳೂರಿಗೆ ಬರುತ್ತಿದ್ದಾರೆ. ಪ್ರತಿ ಸಲ ಅವರ ಬುರುಡೆ ಭಾಷಣ ಕೇಳಿ ಕೇಳಿ ಸಾಕಾಗಿದೆ. ಈ ಬಾರಿಯಾದರೂ 40% ಕಮಿಷನ್ 50% ಏರಿಕೆಯಾಗಿದ್ದು ಯಾಕೆ? ಅದು ಯಾರ ಉದ್ಧಾರಕ್ಕೆ? ಕಮಿಷನ್ ದಂಧೆಯಲ್ಲಿ ಬಿಜೆಪಿ ನಾಯಕರಿಗೆ ಸಂದಾಯವಾಗುತ್ತಿರುವ ಪಾಲಿನ ಬಗ್ಗೆ ಮೋದಿಯವರಿಂದ ಭಾಷಣ ಮಾಡಿಸಲು ಸಾಧ್ಯವೇ ಎಂದು ಕೇಳಿದ್ದಾರೆ.

ಈ ಸರ್ಕಾರದ ಭ್ರಷ್ಟಾಚಾರದ ಕರ್ಮಕಾಂಡದ ಬಗ್ಗೆ ಮೊನ್ನೆಯಷ್ಟೇ ಹೈಕೋರ್ಟ್ ಚಾಟಿ ಬೀಸಿದೆ. ಇಷ್ಟದಾರೂ ಈ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಈ ಸರ್ಕಾರದ ನಡೆ ನೋಡಿದರೆ ಆಲಿಬಾಬ ಮತ್ತು 40 ಕಳ್ಳರ ಕಥೆ ನೆನಪಾಗುತ್ತದೆ. ಕಳ್ಳರು ಜನರಿಂದ ದೋಚಿದರೆ, ಆಲಿಬಾಬ ಕಳ್ಳರಿಂದ ದೋಚಿದಂತಾಗಿದೆ. ಆದರೆ ಆ ಆಲಿಬಾಬ ಯಾರು ಎಂದು ಮೋದಿಯವರನ್ನೇ ಕೇಳಬೇಕು ಎಂದು ವ್ಯಂಗ್ಯವಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!